Advertisement

ಶಾಸಕರ ಆರೋಪ ನಿರಾಧಾರ ಎಂದ ನಡ್ಡಾ

07:14 AM Jul 15, 2019 | Lakshmi GovindaRaj |

ರಾಂಚಿ: ಕರ್ನಾಟಕದಲ್ಲಿ ಶಾಸಕರ ಖರೀದಿಯಲ್ಲಿ ಪಕ್ಷ ತೊಡಗಿದೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪವನ್ನು ಬಿಜೆಪಿ ತಿರಸ್ಕರಿಸಿದೆ. ರಾಂಚಿಯಲ್ಲಿ ಭಾನುವಾರ ಮಾತನಾಡಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್‌ ಅಧ್ಯಕ್ಷರು ಮಾಡಿರುವ ಆರೋಪ ಆಧಾರರಹಿತ. ಅಲ್ಲಿನ ಬೆಳವಣಿಗೆಗಳು ಏನಿದ್ದರೂ, ಆ ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್‌ ಅಧ್ಯಕ್ಷರೇ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Advertisement

ಇದಾದ ಬಳಿಕ ಹಲವರು ತಮ್ಮ ಹುದ್ದೆಗಳನ್ನು ಬಿಡುತ್ತಿದ್ದಾರೆ ಎಂದು ಹೇಳಿದ್ದಾರೆ. ಗೋವಾ ಮತ್ತು ಕರ್ನಾಟಕದಲ್ಲಿನ ಬೆಳವಣಿಗೆಗಳು ಕಾಂಗ್ರೆಸ್‌ ಮುಕ್ತ ಭಾರತ ಸೂಚನೆಯೇ ಎಂದು ಕೇಳಿದಾಗ ನಡ್ಡಾ “ಕಾಂಗ್ರೆಸ್‌ ಮುಕ್ತ ಭಾರತ ಎಂದರೆ ಆ ಪಕ್ಷ ಹೊಂದಿರುವ ಸಂಸ್ಕೃತಿ ಮತ್ತು ಭ್ರಷ್ಟಾಚಾರವನ್ನು ನಿವಾರಿಸುವುದು ಎಂದು ಅರ್ಥ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next