Advertisement

ಸ್ವರ್ಣೆ ತಟದಲ್ಲಿ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ಪುಸ್ತಕ ಬಿಡುಗಡೆ

01:30 AM Dec 24, 2018 | Karthik A |

ಕಾರ್ಕಳ: ಉಡುಪಿ ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್‌ ಕಾಮತ್‌ ಅವರ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕ ಡಿ. 22ರಂದು ಸಂಜೆ ತಾಲೂಕಿನ ಬಜಗೋಳಿ ಸಮೀಪದ ಕಡಾರಿಯ ಸ್ವರ್ಣ ನದಿ ತಟದಲ್ಲಿ ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಂಡಿತು. ಒಂದೂವರೆ ಸಾವಿರ ಹಣತೆಗಳ ಬೆಳಕು, ನಾದ ಮಣಿ ನಾಲ್ಕೂರು ಅವರ ಕತ್ತಲ ಹಾಡು ಹಾಗೂ ಇಬ್ಬರು ಮಂಗಳಮುಖೀಯರಾದ ನಗ್ಮಾ ಹಾಗೂ ಕಾಜಲ್‌ ಸ್ವರ್ಣ ನದಿಗೆ ಆರತಿ ಬೆಳಗುವುದರೊಂದಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು.

Advertisement

ಉದ್ಯಮಿ ವಿಶ್ವನಾಥ ಶೆಣೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಇದೊಂದು ವಿಚಿತ್ರ, ವಿಭಿನ್ನವಾದ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಈ ರೀತಿಯಾಗಿ ಎಲ್ಲಿಯೂ ಆಗಿರಲಿಕ್ಕಿಲ್ಲ. ಸಾವಿರಾರು ದೀಪಗಳ ನಡುವೆ ಪುಸ್ತಕ ಬಿಡುಗಡೆಯಾಗುತ್ತಿರುವುದು ಇದೊಂದು ಸಂಭ್ರಮ ಎಂದು ಹೇಳಿದರು.


ಲೇಖಕ ಮಂಜುನಾಥ ಕಾಮತ್‌ ಮಾತನಾಡಿ, ಪ್ರಸ್ತುತ ನಮಗೆ ನೀರು, ನದಿ ತುಂಬಾ ಮುಖ್ಯ. ಇಲ್ಲಿನ ನದಿಯ ಬಗ್ಗೆ ಪ್ರೀತಿ, ಕಾಳಜಿ ಮೂಡಬೇಕು. ನದಿಯನ್ನು ಹೆಣ್ಣು ಅಂತ ನಾವು ಆರಾಧಿಸುತ್ತೇವೆ. ಕಾಶಿಗೆ ತೆರಳಿದಾಗ ಅಲ್ಲಿ ಕೆಲವು ಸಂದರ್ಭ ಲಕ್ಷಗಟ್ಟಲೆ ಹಣತೆ ಬೆಳಗಿಸಿ ಗಂಗೆಗೆ ಆರತಿ ಬೆಳಗಿಸುವ ಬಗ್ಗೆ ಕೇಳಿ, ಗಮನಿಸಿದ್ದೆ. ಆದರೆ ಅದು ನನಗೆ ನೋಡಲು ಸಾಧ್ಯವಾಗಿಲ್ಲ. ನಮ್ಮೂರಲ್ಲೇ ಅಂತಹ ಕಾರ್ಯಕ್ರಮ ಮಾಡಬೇಕೆಂದು ಯೋಚಿಸಿ, ಆ ರೀತಿ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ ಎಂದರು. ಆಕೃತಿ ಪಬ್ಲಿಕೇಶನ್‌ನ ಕಲ್ಲೂರು ನಾಗೇಶ್‌ ಪ್ರಸ್ತಾವನೆಗೈದು, ನಿರೂಪಿಸಿದರು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next