Advertisement

ನಾಯಿ ಸಿಂಹವನ್ನೂ ನಾಯಿ ಎಂದೆ ಭಾವಿಸುತ್ತದೆ: ಸಿದ್ದರಾಮಯ್ಯ ಹೇಳಿಕೆಗೆ ರವಿ ಕುಮಾರ್ ತಿರುಗೇಟು

03:21 PM Jul 05, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪ ‘ಕುತ್ತಾ’ ಎಂಬ ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

“ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ಮನಬಂದಂತೆ ಮಾತನಾಡಿದ್ದಾರೆ. ಅದು ಯಡಿಯೂರಪ್ಪ ತಪ್ಪಲ್ಲ, ಸಿದ್ದರಾಮಯ್ಯರ ತಪ್ಪು. ನಾಯಿ ಸಿಂಹವನ್ನೂ ಕೂಡ ನಾಯಿ ಎಂದೇ ಭಾವಿಸುತ್ತದೆ. ಯಡಿಯೂರಪ್ಪ ಸಿಂಹನೇ. ಸಿದ್ದರಾಮಯ್ಯ ನಾಯಿಯಾಗಿ ನಾಯಿ ಅಂತ ಭಾವಿಸಿ ಬಿಟ್ಟಿದ್ದಾರೆ. ಯಡಿಯೂರಪ್ಪ ದೆಹಲಿಗೆ ಹೋದರೂ ಸಿಂಹವೇ, ಇಲ್ಲಿದ್ದರೂ ಸಿಂಹವೇ. ಇಲ್ಲದಿದ್ದರೆ ಇಷ್ಟೆಲ್ಲ ಯಾಕೆ ಹೋರಾಟ ಮಾಡಬೇಕಿತ್ತು. ಯಾರು ಸಿಂಹ, ಯಾರು ಹುಲಿ, ಯಾರು ನಾಯಿ ಎಂದು ಜನ ತೀರ್ಮಾನ ಮಾಡಿಬಿಟ್ಟಿದ್ದಾರೆ ಎಂದು ರವಿ ಕುಮಾರ್ ತಿರುಗೇಟು ನೀಡಿದರು.

ಇದನ್ನೂ ಓದಿ:ನಾಯಕತ್ವ ಬದಲಾವಣೆ ಹಾದಿ ಬೀದಿಯ ಚರ್ಚೆ ವಿಷಯವಲ್ಲ: ಯತ್ನಾಳ್ ಗೆ ಕಟೀಲ್ ತಿರುಗೇಟು

ಸಿದ್ದರಾಮಯ್ಯಗೆ ತಮ್ಮ ಕ್ಷೇತ್ರ ಗುರುತು ಮಾಡಿಕೊಳ್ಳಲಾಗಲಿಲ್ಲ. ತಮ್ಮ ಸೀಟು ಉಳಿಸಿಕೊಳ್ಳಲು ಬಾದಾಮಿಗೆ ಪಲಾಯನ ಮಾಡಿದ್ದರು. ಈಗ ಜಮೀರ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಕ್ಷೇತ್ರ ಹುಡುಕಿಕೊಳ್ತಿದ್ದಾರೆ ಇವತ್ತೇ ಚಾಲೆಂಜ್ ಮಾಡುತ್ತೇನೆ, ಸಿದ್ದರಾಮಯ್ಯ ಧಂ ಇದ್ದರೆ ಬದಾಮಿಯಲ್ಲಿ ಸ್ಪರ್ಧೆ ಮಾಡಲಿ ಎಂದು ಸವಾಲೆಸೆದರು.

ದೆಹಲಿಯಲ್ಲಿ ಇರಲಿ, ರಾಜ್ಯದಲ್ಲೇ ಇರಲಿ ಯಡಿಯೂರಪ್ಪ ಸಿಂಹವೇ. ಸಿಂಹದ ಘರ್ಜನೆ ಎಲ್ಲ ಕಡೆ ಕೇಳತ್ತೆ. ಸಿದ್ದರಾಮಯ್ಯ ಅಸಭ್ಯವಾಗಿ ಸುಸಂಸ್ಕೃತಿ ಪ್ರದರ್ಶನ ಮಾಡುತ್ತಿದ್ದಾರೆ. ಸಭ್ಯತೆ ನಾಗರೀಕತೆ ಸಿದ್ದರಾಮಯ್ಯಗೆ ಇಲ್ಲ.

Advertisement

ಸಿದ್ದರಾಮಯ್ಯ ಸ್ಥಾನಕ್ಕೆ ಈ ಮಾತು ಯೋಗ್ಯವಲ್ಲ. ಪ್ರಧಾನಮಂತ್ರಿಗೂ ಹೀಗೆ ಮಾತನಾಡೋದು ಕಾಂಗ್ರೆಸ್ ನ ಕೆಟ್ಟ ಸಂಸ್ಕೃತಿ. ಹೀನ ಸಂಸ್ಕೃತಿಯನ್ನು ಬಿಟ್ಟು ನಾಗರೀಕತೆಯನ್ನು ಕಲಿಯಲಿ ಎಂದು ರವಿ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next