Advertisement

ಹಿರಿಯ ರಾಜಕಾರಣಿ ಎನ್‌.ಡೀ ತಿವಾರಿ ನಿಧನ

06:00 AM Oct 20, 2018 | Team Udayavani |

ನವದೆಹಲಿ: ಮೂರು ಬಾರಿ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ, ಮಾಜಿ ಸ್ವಾತಂತ್ರ ಹೋರಾಟಗಾರ, ಕಾಂಗ್ರೆಸ್‌ನ ಹಿರಿಯ ನಾಯಕ ನಾರಾಯಣ ದತ್‌ ತಿವಾರಿ (93) ಗುರುವಾರ ನಿಧನರಾದರು.  ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಹು ಅಂಗಾಂಗ ವೈಫ‌ಲ್ಯಕ್ಕೆ ತುತ್ತಾಗಿದ್ದರು. ಕಳೆದೊಂದು ವರ್ಷದಿಂದಲೂ ದೆಹಲಿಯ ಮ್ಯಾಕ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೊಳಗಾಗಿದ್ದ ಅವರು ಗುರುವಾರ ಮಧ್ಯಾಹ್ನ 2:50ಕ್ಕೆ ನಿಧನರಾದರು. 1925ರ ಅ. 18ರಂದು ಜನಿಸಿದ್ದ ತಿವಾರಿ, ತಮ್ಮ 93ನೇ ಹುಟ್ಟುಹಬ್ಬದ ದಿನದಂದೇ ವಿಧಿವಶರಾಗಿದ್ದು ವಿಪರ್ಯಾಸ. ತಿವಾರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್‌ ಸೇರಿದಂತೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. 

Advertisement

ಸಾಧನೆಗಳು, ವಿವಾದಗಳು: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದ್ದರು. ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾಗ ರಾಜಭವನದ ಸೆಕ್ಸ್‌ ಹಗರಣದಲ್ಲಿ ಅವರು ತಲೆತಗ್ಗಿಸುವಂತಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next