Advertisement

Mysuru; ಹೆಣ್ಣು ಭ್ರೂಣ ಹತ್ಯೆ:ಆಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್ ದಿಢೀರ್ ಭೇಟಿ

08:42 PM Nov 30, 2023 | Team Udayavani |

ಮೈಸೂರು: ಇಲ್ಲಿನ ಉದಯಗಿರಿಯ ಮುಖ್ಯ ರಸ್ತೆಯಲ್ಲಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆದಿರುವ ಮಾತಾ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಯಾರಿಗೂ ಮಾಹಿತಿ ನೀಡದೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳದಲ್ಲೇ ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು. ನನಗೆ ಸತ್ಯ ಹೇಳಿ, ಇಲ್ಲಿ ಈಗ್ಯಾಕೇ ನೋಟಿಸ್ ಅಂಟಿಸಿದ್ದೀರಿ. ನಿಮಗೆ ಇಲ್ಲಿ ಆಸ್ಪತ್ರೆ ಇತ್ತು ಎಂದು ಗೊತ್ತಿರಲಿಲ್ಲವೇ? ಇದು ಗಂಭೀರವಾದ ಪ್ರಕರಣ.ಇಲ್ಲಿ ಸುಳ್ಳು ಹೇಳಬೇಡಿ ಎಂದು ಕಿಡಿ ಕಾರಿದರು.

ಇಲ್ಲ ಸರ್ ನಾನು ಎರೆಡು ವರ್ಷಗಳಿಂದ ಇಲ್ಲೆ ಕೆಲಸ ಮಾಡುತ್ತಿದ್ದೇನೆ. ನಾನು ಬಂದಾಗಿನಿಂದ ಇಲ್ಲಿ ಅಸ್ಪತ್ರೆ ಇರಲಿಲ್ಲ ಎಂದು ಆರೋಗ್ಯಾಧಿಕಾರಿ ರಾಜೇಶ್ವರಿ ಉತ್ತರ ನೀಡಿದರು. ತತ್ ಕ್ಷಣ ಸಚಿವ ದಿನೇಶ್ ಗುಂಡೂರಾವ್ ಅವರು ಅಕ್ಕಪಕ್ಕದವರನ್ನು ಕರೆದು ಮಾಹಿತಿ ಪಡೆದರು.

ಸ್ಥಳೀಯರು, ಇಲ್ಲಿ ಆಸ್ಪತ್ರೆ ನಡೆಯುತ್ತಿದೆ.ಆದರೆ ಕಳೆದ ಮೂರು ತಿಂಗಳ ಹಿಂದೆ ಬಂದ್ ಆಗಿದೆ ಎಂದರು.
ಮತ್ತೆ ಆರೋಗ್ಯಾಧಿಕಾರಿ ಮೇಲೆ ಕುಪಿತಗೊಂಡರು, ಇಲ್ಲಾ ಸರ್ ನಿಜವಾಗಲೂ ಆಸ್ಪತ್ರೆ ಇರಲಿಲ್ಲ.ಲೆಟರ್ ಟೈಪ್ ಮಾಡುವ ವೇಳೆ ದಿನಾಂಕ ತಪ್ಪಾಗಿದೆ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next