Advertisement

ಮೈಸೂರು ವಿವಿಗೆ ಕುಲಪತಿ ನೇಮಕಕ್ಕೆ ಆಗ್ರಹ 

12:40 PM Jul 04, 2018 | |

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಿಸುವಂತೆ ಒತ್ತಾಯಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಸದಸ್ಯರು ನಗರದ ನ್ಯಾಯಾಲಯದ ಸಮೀಪದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. 

Advertisement

ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಮೈಸೂರು ವಿವಿಗೆ ಕಳೆದ ಒಂದೂವರೆ ವರ್ಷಗಳಿಂದ ಕಾಯಂ ಕುಲಪತಿ ಇಲ್ಲದೆ ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಕೇವಲ ಪ್ರಭಾರ ಕುಲಪತಿಗಳ ನೇಮಕದಿಂದ ವಿವಿ ಆಡಳಿತಕ್ಕೆ ಕಪ್ಪುಚುಕ್ಕಿ ತರುವಂತಹ ಅನೇಕ ಘಟನಾವಳಿಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ವಿವಿಗೆ ಕುಲಪತಿ ನೇಮಕ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಶಿಕ್ಷಣ ತಜ್ಞರನ್ನು ವಿವಿ ಕುಲಪತಿಯಾಗಿ ನೇಮಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣ, ಸದಸ್ಯರಾದ ಎ.ಪಿ.ರಾಜೇಶ್‌ಗೌಡ, ಕೆ.ಎಚ್‌.ರಮೇಶ್‌, ವಿನೋದ್‌ನಾಗವಾಲ, ಜಿ.ಎಂ.ದಿವಾಕರ, ಎಂ.ಶಿವಪ್ರಕಾಶ್‌, ಕುಮಾರಬೀಡು ಸುರೇಶ್‌ ಇನ್ನಿತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next