Advertisement

ಮಹದಾಯಿ ವಿವಾದ ಇತ್ಯರ್ಥ ನನ್ನ ಜವಾಬ್ದಾರಿ

06:05 AM Nov 30, 2017 | Team Udayavani |

ಬಾಗಲಕೋಟೆ: “ಮಹದಾಯಿ ಕುಡಿಯುವ ನೀರು ಯೋಜನೆಯ ವಿವಾದ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಪ್ರವೇಶ ಇಲ್ಲದೇ ಸಾಧ್ಯವಿಲ್ಲ. ನಮ್ಮ ರಾಜ್ಯದ ಸಿಎಂ ಈ ಕುರಿತು ದಿವ್ಯ ನಿರ್ಲಕ್ಷé ವಹಿಸಿದ್ದಾರೆ. ಹೀಗಾಗಿ, ನಾನೇ ಮಹಾರಾಷ್ಟ್ರ, ಗೋವಾ ಸಿಎಂಗಳ ಜತೆಗೆ ಮಾತನಾಡಿ, ಶೀಘ್ರವೇ ವಿವಾದ ಬಗೆಹರಿಸುವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾನು ಉಪ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ನೀಡಿ, ಮಹದಾಯಿ ನದಿಯನ್ನು ಕಳಸಾ-ಬಂಡೂರಿ ನಾಲೆಗೆ ಜೋಡಿಸುವ ಕಾಮಗಾರಿಗೆ ಚಾಲನೆ ನೀಡಿದ್ದೆ. ಆದರೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ಗೋವಾದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೇಳಿದ್ದರು. ಈ ವಿವಾದ ನ್ಯಾಯಾಧಿಕರಣದ ಮೆಟ್ಟಿಲು ಹತ್ತಲು ಇದೇ ಕಾಂಗ್ರೆಸ್‌ನವರು ಕಾರಣ’ ಎಂದು ಆರೋಪಿಸಿದರು.

“ಗೋವಾ, ಮಹಾರಾಷ್ಟ್ರದ ಸಿಎಂಗಳನ್ನು ನಾವು ಒಪ್ಪಿಸುತ್ತೇವೆ. ನೀವು ವಿಪಕ್ಷಗಳನ್ನು ಒಪ್ಪಿಸಿ ಎಂದು ನಾವು ಒಂದು ವರ್ಷದಿಂದ ಹೇಳುತ್ತಿದ್ದೇವೆ. ಈವರೆಗೆ ಈ ಪ್ರಯತ್ನವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮಾಡಿಲ್ಲ. 7.56 ಟಿಎಂಸಿ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಈಗಾಗಲೇ ಗೋವಾ ಸಿಎಂ ಜತೆ ಮಾತನಾಡಿದ್ದೇನೆ. ಶೀಘ್ರವೇ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥ ಪಡಿಸುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿ ನನ್ನದೆ’ ಎಂದು ಹೇಳಿದರು.

ತಲೆ ತಿರುಕ ಸಿಎಂ:
ಮಹದಾಯಿ ವಿಷಯದಲ್ಲಿ ಬಿಜೆಪಿಯವರು ಉತ್ತರ ಕುಮಾರನ ಪೌರುಷದಂತೆ ವರ್ತಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಟೀಕೆಗೆ ಖಾರವಾಗಿ ಉತ್ತರಿಸಿದ ಬಿಎಸ್‌ವೈ, “ತಲೆ ತಿರುಕ ಮುಖ್ಯಮಂತ್ರಿಯಿಂದ ನಮಗೆ ಪ್ರಮಾಣಪತ್ರ ಬೇಕಿಲ್ಲ. ಮಹದಾಯಿ ವಿಷಯದಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿ- ಪಾತ್ರ ಏನೆಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next