Advertisement

ನನ್ನ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ: ಆರ್.ವಿ.ದೇಶಪಾಂಡೆ

02:40 PM Nov 03, 2019 | Suhan S |

ದಾಂಡೇಲಿ; ಈ ಭಾಗದ ಜನರ ಜನರ ಕನಸು ನನಸಾಗುತ್ತಿದೆ. ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇವಾಡಿ-ಅಳ್ನಾವರ ನಡುವಿನ ಪ್ರಯಾಣಿಕರ ರೈಲು ಮಾರ್ಗವನ್ನು ಪುನರಾರಂಭಿಸುವಂತೆ ಕಳೆದ 15 ವರ್ಷಗಳಿಂದ ನಾನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ನಡೆಸಿದ ಪತ್ರವ್ಯವಹಾರ ಹಾಗೂ ಮಾತುಕತೆ  ಕೊನೆಗೂ ಫಲ ನೀಡಿದೆ ಇದು ಸಾರ್ಥಕವೆನಿಸಿದೆ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

Advertisement

ಇಂದು ಈ ಮಾರ್ಗದ ಪ್ರಯಾಣಿಕರ ರೈಲು ಉದ್ಘಾಟನೆ ಆಗುತ್ತಿರುವುದು ನನಗೆ ಖುಷಿ ನೀಡಿದ್ದು, ಪ್ರಯತ್ನ ಸಾರ್ಥಕವೆನಿಸಿದೆ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಈ ಮೂಲಕ ಇಲ್ಲಿಯ ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಕಾಣಲಿದ್ದು, ನಿರುದ್ಯೋಗ  ಯುವಕರಿಗೆ ಉದ್ಯೋಗ ದೊರೆಯಲಿದೆ. ಈ ಮೂಲಕ ಜನರ ಆರ್ಥಿಕತೆಯೂ ಸುಧಾರಿಸಲಿದೆ. ದಾಂಡೇಲಿಯ ಜನರು ಹಾಗೂ ಕೇಂದ್ರ ಸಚಿವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು..

Advertisement

Udayavani is now on Telegram. Click here to join our channel and stay updated with the latest news.

Next