Advertisement

ಆಸರೆ ಗೃಹ ಅತ್ಯಾಚಾರ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿದ ಸಿಎಂ ನಿತೀಶ್‌

12:12 PM Jul 26, 2018 | Team Udayavani |

ಪಟ್ನಾ : ಮುಜಫ‌ರನಗರ ಆಸರೆ ಗೃಹ ಅತ್ಯಾಚಾರ ಹಗರಣದ ತನಿಖೆಯನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಿಬಿಐಗೆ ಒಪ್ಪಿಸಿದ್ದಾರೆ. 

Advertisement

ಇದೇ ವೇಳೆ ವಿರೋಧ ಪಕ್ಷಗಳು, ಈ ಹಗರಣದ ಹೊಣೆ ಹೊತ್ತು ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿವೆ. 

ಎಎನ್‌ಐ ವರದಿಯ ಪ್ರಕಾರ ಸಿಎಂ ನಿತೀಶ್‌ ಕುಮಾರ್‌ ಅವರು ಇಂದು ಗುರುವಾರ ಸರಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಆಸರೆ ಗೃಹ ಹಗರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸುವಂತೆ ಆದೇಶ ಹೊರಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next