Advertisement

Muslims; ಹಿಮಾಚಲ ಸೇಬು ಬಹಿಷ್ಕರಿಸಿ: ಒವೈಸಿ ಪಕ್ಷದ ನಾಯಕನ ವಿವಾದ

01:34 AM Oct 14, 2024 | Team Udayavani |

ಶಿಮ್ಲಾ: ಮುಸ್ಲಿಂ ವ್ಯಾಪಾರಸ್ಥರು ಹಿಮಾಚಲ ಪ್ರದೇಶದ ಸೇಬುಗಳನ್ನು ಬಹಿಷ್ಕರಿಸಿ ಎಂದಿರುವ ಎಂಐಎಂ ನಾಯಕ ಶೋಯಬ್‌ ಜಮಾಯಿ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ, “ಶೇ.80ರಷ್ಟು ಇರುವ ಮುಸ್ಲಿಂ ವ್ಯಾಪಾರಿಗಳು ಹಿಮಾಚಲದ ಸೇಬುಗಳನ್ನು ಬಹಿಷ್ಕರಿಸಿ. ಈ ದ್ವೇಷದ ಮಾರುಕಟ್ಟೆಯಿಂದ ಏನನ್ನೂ ಖರೀದಿಸಬೇಡಿ’ ಎಂದಿದ್ದರು.

Advertisement

ಅದಕ್ಕೆ ಬಿಜೆಪಿ ನಾಯಕ ಚೇತನ್‌ ಬ್ರಗಾತ್‌ ಪ್ರತಿಕ್ರಿಯಿಸಿ, “ನಿಮ್ಮ ಬೆದರಿಕೆಗೆ ಸೇಬು ಬೆಳೆಗಾರರು ಹೆದರುವುದಿಲ್ಲ’ ಎಂದಿದ್ದರು. ಜಮಾಯ್‌ ಟ್ವೀಟ್‌ಗೆ ಆಕ್ಷೇಪ ವ್ಯಕ್ತವಾದ್ದರಿಂದ ಮತ್ತೂಂದು ಟ್ವೀಟ್‌ ಮಾಡಿ ಸಂಜೌಲಿ ಮಸೀದಿ ವಿಚಾರದಲ್ಲಿ ಭಾವುಕನಾಗಿ ಮಾತನಾಡಿದ್ದೆ. ನಮಗೆ ಸಹಾಯ ಮಾಡುವ ಶಿಮ್ಲಾದ ಜಾತ್ಯತೀತ ಹಿಂದೂ ಸಮುದಾಯಕ್ಕೆ ಕೃತಜ್ಞತೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next