Advertisement

ಶಾಸಕ ರಾಜಾಸಿಂಗ್‌ ವಿರುದ್ದ ಮುಸ್ಲಿಮರ ಪ್ರತಿಭಟನೆ

03:32 PM Aug 26, 2022 | Team Udayavani |

ಚಿಂಚೋಳಿ: ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ತೆಲಂಗಾಣ ರಾಜ್ಯದ ಬಿಜೆಪಿಯ ಶಾಸಕ ರಾಜಾಸಿಂಗ್‌ ಅವರನ್ನು ಬಂಧಿಸಿ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ ಕಚೇರಿ ಎದುರು ಮುಸ್ಲಿಮರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ವಿವಾದಿತ ಹಾಸ್ಯ ಕಲಾವಿದ ಮುನವ್ವರ ಫಾರೂಕಿ ಅವರನ್ನು ಟೀಕಿಸಿದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ ಶರ್ಮಾ ಅವರನ್ನು ಅನುಕರಿಸಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ವಿರುದ್ದ ನೀಡಿರುವ ಹೇಳಿಕೆಯ ದೃಶ್ಯದ ತುಣುಕನ್ನು ಬಿಜೆಪಿ ಶಾಸಕ ರಾಜಾಸಿಂಗ್‌ ಜಾಲತಾಣದಲ್ಲಿ ಉಡುಗೆ ತೊಡುಗೆಗಳನ್ನು ಅವಹೇಳನ ಮಾಡಿ ವಿಡಿಯೋ ಹಂಚಿಕೊಂಡಿರುವುದನ್ನು ಮುಸ್ಲಿಮರು ತೀವ್ರವಾಗಿ ಖಂಡಿಸಿದರು.

ಬಿಜೆಪಿ ಶಾಸಕ ರಾಜಾಸಿಂಗ ಅವರು ಪ್ರವಾದಿ ಮಹಮ್ಮದ ಕುರಿತು ನೀಡಿದ ಹೇಳಿಕೆಯು ವಿವಾದಕ್ಕೀಡಾಗಿದೆ. ಕೂಡಲೇ ಬಂಸಿ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಮುಸ್ಲಿಮರು ಒತ್ತಾಯಿಸಿದರು.

ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ2 ತಹಸೀಲ್ದಾರ ವೆಂಕಟೇಶ ದುಗ್ಗನ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಡಿದರ್ಗಾ ಅಕಬರ ಹುಸೇನಿ ಸಾಹೇಬ, ಪುರಸಭೆ ಸದಸ್ಯರಾದ ಅನವರ ಖತೀಬ,ಸೈಯದ ಶಬ್ಬೀರ ಅಹೆಮದ,ಖಲೀಲ ಪಟೇಲ,ತಾಹೆರ ಕುರೇಶಿ, ಮಕತುಮ,ಹಸೇನ ಹಾಶ್ಮಿ,ಜುನೇದ, ಅಜರುದ್ದೀನ್‌ ,ಸಲಾಮ,ಸೈಯದ ಇಸ್ಲಾಮ ಹಾಫೀಜ,ಆನಂದ ಟೈಗರ,ಮಾರುತಿ ಗಂಜಗಿರಿಇನ್ನಿತರಿದ್ದರು.ಪಟ್ಟಣದ ಕನಕದಾಸರ ವೃತ್ತದಿಂದ ತಹಶಿಲ್ದಾರ್ ಕಚೇರಿವರೆಗೆ ಭಾರಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next