Advertisement

ತಿಮ್ಮಪ್ಪನಿಗೆ ಮುಸ್ಲಿಂ ದಂಪತಿಯಿಂದ 1.02 ಕೋಟಿ ರೂ. ದೇಣಿಗೆ

08:06 PM Sep 20, 2022 | Team Udayavani |

ತಿರುಪತಿ: ಆಂಧ್ರಪ್ರದೇಶ ತಿರುಪತಿ ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಮುಸ್ಲಿಂ ದಂಪತಿ 1.02 ಕೋಟಿ ರೂ. ದೇಣಿಗೆ ಕೊಟ್ಟಿದೆ. ಅಬ್ದುಲ್‌ ಘನಿ ಮತ್ತು ನುಬೀನಾ ಬಾನು ದೇಣಿಗೆಯ ಚೆಕ್‌ ಅನ್ನು ಮಂಗಳವಾರ ದೇಗುಲದ ಆಡಳಿತ ಮಂಡಳಿಯಾದ ಟಿಟಿಡಿಗೆ ಹಸ್ತಾಂತರಿಸಿದ್ದಾರೆ.

Advertisement

ಅದರಲ್ಲಿ 15 ಲಕ್ಷ ರೂ. ಅನ್ನು ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್‌ಗೆ ಹಾಗೂ 87 ಲಕ್ಷ ರೂ. ಅನ್ನು ಪದ್ಮಾವತಿ ಗೆಸ್ಟ್‌ ಹೌಸ್‌ನ ಪೀಠೊಪಕರಣಗಳು ಹಾಗೂ ಅಡುಗೆ ಪರಿಕರಗಳನ್ನು ಖರೀದಿಸಲು ಕೊಡಲಾಗಿದೆ. ಈ ದಂಪತಿ ತಿಮ್ಮಪ್ಪನ ಸನ್ನಿಧಿಗೆ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಕೊರೊನಾ ಸೋಂಕು ಹೆಚ್ಚಿದ್ದಾಗ, ದೇವಸ್ಥಾನದ ಸ್ವತ್ಛತೆಗೆಂದು ಟ್ರ್ಯಾಕ್ಟರ್‌ ಮೌಂಟೆಡ್‌ ಸ್ಪ್ರೆàಯರ್‌ ಅನ್ನು ಹಾಗೂ ಅದಕ್ಕೂ ಮೊದಲು ತರಕಾರಿಗಳ ಸಾಗಣೆಗೆ 35 ಲಕ್ಷ ರೂ. ಮೌಲ್ಯದ ರೆಫ್ರಿಜರೇಟರ್‌ ಟ್ರಕ್‌ ಅನ್ನು ದೇಣಿಗೆ ಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next