Advertisement

ಸಿದ್ದೇಶ್ವರ ಶ್ರೀಗಳ ಚೇತರಿಕೆಗಾಗಿ ಇಸ್ಲಾಮೀಯರಿಂದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

08:37 PM Jan 02, 2023 | Team Udayavani |

ವಿಜಯಪುರ: ಸಿದ್ದೇಶ್ವರ ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಇಸ್ಲಾಂ ಧರ್ಮೀಯರು ನಗರದ ಅಬ್ದುಲ್ ರಜಾಕ ದರ್ಗಾದಲ್ಲಿ ವಿಶೇಶ ಪ್ರಾರ್ಥನೆ ಸಲ್ಲಿಸಿದರು.

Advertisement

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ದರ್ಗಾಕ್ಕೆ ತೆರಳಿದ ಇಸ್ಲಾಂ ಧರ್ಮೀಯರು, ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀ ಸ್ವಾಮೀಜಿಗಳ ಭಕ್ತರು ಶ್ರೀಗಳ ಆರೋಗ್ಯ ಸುಧಾರಣೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಶ್ರೀಫ್, ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಭಕ್ತರನ್ನು ಸಂಪಾದಿಸಿದ್ದಾರೆ. ನಮ್ಮ ಜೀವನಕ್ಕೆ ಚೇತೋಹಾರಿಯಾಗಿರುವ ಶ್ರೀಗಳು ಶೀರ್ಘರ ಗುಣಮುಖರಾಗಿ ಮತ್ತೆ ಪ್ರವಚನ ನೀಡುವಂತಾಗಲಿ, ಶತಾಯುಷಿಗಳಾಗಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು.

ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸದ ಬಳಿ ಬಾಂಬ್ ಪತ್ತೆ, ಬಾಂಬ್ ನಿಷ್ಕ್ರಿಯ ತಂಡ ದೌಡು

 

Advertisement
Advertisement

Udayavani is now on Telegram. Click here to join our channel and stay updated with the latest news.

Next