Advertisement

ಮುಶರಫ್ ಹೇಳಿದಂತೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು:ಕೈ ನಾಯಕ ವಿವಾದ

10:52 AM Jun 22, 2018 | Team Udayavani |

ಹೊಸದಿಲ್ಲಿ : ಪರ್ವೇಜ್‌ ಮುಶರಫ್ ಹೇಳಿದಂತೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು ಎನ್ನುವ ಮೂಲಕ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಸೈಫ‌ುದ್ದೀನ್‌ ಸೋಜ್‌ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. 

Advertisement

ಎಎನ್‌ಐನೊಂದಿಗೆ ಮಾತನಾಡಿದ ಸೋಜ್‌ ಮುಶರಫ್ ಹೇಳಿದ್ದು ಸರಿಯಾಗಿದೆ. ಅವರು ಕಾಶ್ಮೀರ ಪಾಕಿಸ್ಥಾನದೊಂದಿಗೆ ವಿಲೀನವಾಗಲು ಬಯಸುವುದಿಲ್ಲ ಎಂದಿದ್ದರು, ಅಂತೆಯೆ ಕಾಶ್ಮೀರ ಮೊದಲು ಸ್ವಾಯುತ್ತತೆ ಪಡೆದುಕೊಳ್ಳಬೇಕು . ಮುಶರಫ್ ಹೇಳಿಕೆ ಅಂದಿಗೂ ಸತ್ಯ,ಇಂದಿಗೂ ಸತ್ಯವೇ ಆಗಿದೆ. ನಾನು ಅದನ್ನೇ ಹೇಳುತ್ತೇನೆ ಆದರೆ ಅದು ಈಗ ಸಾಧ್ಯವಿಲ್ಲ ಎಂದಿದ್ದಾರೆ.

ಸೋಜ್‌ ಬರೆದಿರುವ ‘ಕಾಶ್ಮೀರ್‌: ಗ್ಲಿಂಪ್ಸಸ್‌ ಆಫ್ ಹಿಸ್ಟರಿ ಎಂಡ್‌ ದಿ ಸ್ಟೋರಿ ಆಫ್ ಸ್ಟ್ರಗಲ್‌’ ಮುಂದಿನವಾರ ಬಿಡುಗಡೆಯಾಗಲಿದೆ. 

ಈ ಹಿಂದೆಯೂ ಸೋಜ್‌ ಉಗ್ರ ಬಹ್ರಾನ್‌ ವಾನಿಯನ್ನು ಹತ್ಯೆಗೈಯಬಾರದಿತ್ತು ಎಂದು ವಿವಾದಕ್ಕೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next