Advertisement

ವಿಜಯ ಬ್ಯಾಂಕ್‌ ಇಡಿಯಾಗಿ ಮುರಳಿ

11:35 AM Feb 22, 2018 | |

ಬೆಂಗಳೂರು: ವಿಜಯ ಬ್ಯಾಂಕಿನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುರಳಿ ರಾಮಸ್ವಾಮಿ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಕ್ರೆಡಿಟ್‌ ಆಪರೇಷನ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಹಾಗೂ ಚೀಫ್‌ ಫೈನಾನ್ಷಿಯಲ್‌ ಆಫಿಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಸ್ವಾಮಿ ಅವರ ನೇಮಕ ಫೆ.19 ರಿಂದ ಜಾರಿಗೆ ಬರಲಿದೆ.

Advertisement

1989ರಲ್ಲಿ ವಿಜಯ ಬ್ಯಾಂಕಿನ ಅಧಿಕಾರಿಯಾಗಿ ಸೇರಿದ ಅವರು ವಿವಿಧ ಶಾಖೆಗಳಲ್ಲಿ, ವಲಯ ಹಾಗೂ ಕಾರ್ಪೋರೇಟ್‌ ಕಚೇರಿಯಲ್ಲಿ ಸೇವೆ ಸಲ್ಲಿಸಿದಲ್ಲದೆ ದೇಶ, ವಿದೇಶಗಳ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಆಪಾರ ಅನುಭವ ಗಳಿಸಿದ್ದಾರೆ ಎಂದು ಬ್ಯಾಂಕ್‌ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next