Advertisement

ಮೈಸೂರು ದಸರಾದಲ್ಲಿ ಮುರ್ಡೇಶ್ವರ ಮಧುಕೇಶ್ವರ ದೇವಾಲಯ ಪ್ರದರ್ಶನ

11:26 AM Sep 21, 2019 | Suhan S |

ಕಾರವಾರ: ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬಕ್ಕೆ ಉತ್ತರ ಕನ್ನಡದ ಟ್ಯಾಬ್ಲೋ ಮುರ್ಡೇಶ್ವರ ಮತ್ತು ಬನವಾಸಿಯ ಮಧುಕೇಶ್ವರ ದೇವಾಲಯದ ಪ್ರತಿಕೃತಿಗಳನ್ನು ಮಾಡಿ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಜಿಪಂ ಸಿಇಒ ರೋಶನ್‌ ತಿಳಿಸಿದ್ದಾರೆ.

Advertisement

ಜಿಲ್ಲೆಯ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಾಗಿರುವ ಮುರ್ಡೇಶ್ವರ ಮತ್ತು ಬನವಾಸಿ ಮಧುಕೇಶ್ವರ ದೇವಾಲಯಗಳು ಐತಿಹಾಸಿಕ ಮಹತ್ವ ಹೊಂದಿವೆ. ಅಲ್ಲದೇ ರಾಜ್ಯದ ಪ್ರವಾಸಿಗರನ್ನು, ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿವೆ. ಮುರುಡೇಶ್ವರ ಪುರಾಣ ಪ್ರಸಿದ್ಧಿ ಪಡೆದಿದ್ದರೆ, ಬನವಾಸಿಯ ಮಧುಕೇಶ್ವರ ದೇವಾಲಯ ಕದಂಬ ಅರಸರ ಜೊತೆ ನಂಟು ಇದೆ. ಕದಂಬರು ಕನ್ನಡಿಗರನ್ನು ಆಳಿದ ಪ್ರಥಮ ರಾಜ ಮನೆತನ. ಅಲ್ಲದೇ ಪಂಪ ಮಹಾಕವಿ ಬನವಾಸಿಯನ್ನು ತನ್ನ ಕಾವ್ಯದಲ್ಲಿ ವರ್ಣಿಸಿದ್ದಾನೆ. ಹಾಗಾಗಿ ಬನವಾಸಿಯ ಚಿತ್ರವನ್ನು ಮೈಸೂರು ದಸರಾಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಕಲಾವಿದರನ್ನು ಶನಿವಾರ ನಿರ್ಧರಿಸಲಾಗುತ್ತಿದೆ.

ಟ್ಯಾಬ್ಲೋ ಹೇಗಿರಬೇಕು ಎಂಬುದನ್ನು ಸಹ ಶನಿವಾರ ನಿರ್ಣಯಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಮುರ್ಡೇಶ್ವರ ಮತ್ತು ಬನವಾಸಿ ಪ್ರಮುಖ ಸ್ಥಾನ ಪಡೆದಿವೆ. ಈ ಧಾರ್ಮಿಕ ಮತ್ತು ಸಾಹಿತ್ಯಿಕ ಪ್ರಮುಖ ತಾಣಗಳನ್ನು ಪ್ರವಾಸೋದ್ಯಮವನ್ನು ಮತ್ತಷ್ಟು ಪ್ರಚುರ ಪಡಿಸುವ ದೃಷ್ಟಿಯಿಂದ ಟ್ಯಾಬ್ಲೋ ಮಾಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next