Advertisement

Murdeshwar: ಸಮುದ್ರ ಪಾಲಾಗುತ್ತಿದ್ದ ಮೂವರು ಯುವಕರ ರಕ್ಷಣೆ

06:32 PM Oct 13, 2023 | Team Udayavani |

ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮುರ್ಡೇಶ್ವರ ಕಡಲಿಗೆ ಇಳಿಯಬಾರದು ಎನ್ನುವ ಆದೇಶವನ್ನು ಹಿಂಪಡೆಯಲಾಗಿದ್ದು ಶುಕ್ರವಾರ ಕಡಲಿಗಿಳಿದ ಮೂವರು ಯುವಕರು ನೀರು ಪಾಲಾಗುವ ಹಂತದಲ್ಲಿ ಪಾರಾಗಿ ಬಂದ ಘಟನೆ ವರದಿಯಾಗಿದೆ.

Advertisement

ಕಡಲಿನಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕರನ್ನು ಹಾವೇರಿ ಜಿಲ್ಲೆಯ ಹಂಸನಬಾವಿ ಗ್ರಾಮದ ಸಿದ್ದಾರ್ಥ (24), ದಿಕ್ಷೀತ್ (2೦) ಹಾಗೂ ಸಂತೋಷ (24) ಎಂದು ಗುರುತಿಸಲಾಗಿದೆ.

ಹಾವೇರಿ ಜಿಲ್ಲೆಯಿಂದ 5 ಜನ ಯುವಕರು ಸೇರಿಕೊಂಡು ಪ್ರವಾಸಕ್ಕೆ ಹೊರಟಿದ್ದು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಮುರ್ಡೇಶ್ವರಕ್ಕೆ ಆಗಮಿಸಿದ್ದ ಇವರನ್ನು ಕಡಲು ಆಕರ್ಷಿಸಿದ್ದು ಕಡಲಿನ ಬಗ್ಗೆ ಅರಿವಿಲ್ಲದ ಇವರು ನೀರಿನಲ್ಲಿ ಇಳಿದು ಆಟವಾಡುತ್ತಿದ್ದಾಗ ಅಲೆಯ ಹೊಡೆತಕ್ಕೆ ಸಿಲುಕಿದ್ದರು. ಅಲೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಇವರನ್ನು ಸ್ಥಳದಲ್ಲಿಯೇ ಇದ್ದ ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿ ಮೇಲಕ್ಕೆ ಕರೆ ತಂದರು ಎನ್ನಲಾಗಿದೆ.

ಲೈಫ್ ಗಾರ್ಡ್ ಸಿಬ್ಬಂದಿ ಚಂದ್ರಶೇಖರ ದೇವಾಡಿಗ, ಜಯರಾಮ ಹಾಗೂ ಪಾಂಡು ಇವರ ಸಮಯೋಚಿತ ಸಹಕಾರದಿಂದ ಮೂವರು ಅಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next