Advertisement

ಕೊಲೆ ಕೇಸ್‌: ಸರವಣ ಗ್ರೂಪ್‌ ಮಾಲಕನಿಗೆ ಜೀವಾವಧಿ ಶಿಕ್ಷೆ

01:20 AM Mar 30, 2019 | Team Udayavani |

ಹೊಸದಿಲ್ಲಿ: ಜ್ಯೋತಿಷಿಯ ಮಾತು ಕೇಳಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಅವರ ಹೆಂಡತಿಯನ್ನು ಮದುವೆಯಾಗಲು ಪ್ರಯತ್ನಿಸಿದ್ದ ಸರವಣ ಭವನ ಹೋಟೆಲ್‌ ಸಮೂಹದ ಮಾಲೀಕ ಪಿ. ರಾಜಗೋಪಾಲ್‌ಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. 2001ರಲ್ಲಿ ಜ್ಯೋತಿಷಿಯೊಬ್ಬರ ಮಾತು ಕೇಳಿ ತಮ್ಮದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್‌ ಎಂಬವರ ಪತ್ನಿಯನ್ನು ವಿವಾಹವಾಗಲು ರಾಜಗೋಪಾಲ್‌ ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯಲ್ಲಿ ಸಂತೋಷ್‌ರನ್ನು ಹತ್ಯೆಗೈದಿದ್ದರು. ಇವರಿಗೆ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ಮದ್ರಾಸ್‌ ಹೈಕೋರ್ಟ್‌ ಜೀವಾವಧಿಗೆ ವಿಸ್ತರಿಸಿದ್ದು. ಅದನ್ನು ಪ್ರಶ್ನಿಸಿ ರಾಜಗೋಪಾಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next