Advertisement

ಹಿಂದು ಮುನ್ನಾನಿ ಕಾರ್ಯಕರ್ತನ ಕೊಲೆ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

04:09 PM Aug 02, 2017 | Team Udayavani |

ಕೊಯಮುತ್ತೂರು : ಹಿಂದು ಮುನ್ನಾನಿ ಕಾರ್ಯಕರ್ತ ಶಶಿಕುಮಾರ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸದ್ದಾಂ ಹುಸೇನ್‌ ಎಂಬಾತನಿಗೆ ಇಲ್ಲಿನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Advertisement

ಕಳೆದ ಸೆಪ್ಟಂಬರ್‌ 22ರಂದು ಹಿಂದು ಮುನ್ನಾನಿ ಸಂಘಟನೆಯ ಜಿಲ್ಲಾ ವಕ್ತಾರ ಬೈಕಿನಲ್ಲಿ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ಹಂತಕರು ಬೈಕಿನಲ್ಲಿ ಆತನನ್ನು ಬೆನ್ನಟ್ಟಿ ತಲವಾರಿನಿಂದ ಕಡಿದು ಮಾರಣಾಂತಿಕ ದಾಳಿ ಮಾಡಿದ್ದರು.

ಶಶಿಕಾಂತ್‌ ಕೊನೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯ ವೇಳೆ ಹಿಂಸೆ ಸ್ಫೋಟಗೊಂಡಿತ್ತು. 

ಶಶಿಕಾಂತ್‌ ಹತ್ಯೆಯ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಸದ್ದಾಂ ಹುಸೇನ್‌ ನನ್ನು ನಿನ್ನೆ ಮಂಗಳವಾರ ಇಲ್ಲಿ,ದ 20 ಕಿ.ಮೀ. ದೂರದಲ್ಲಿರುವ ಕರುಮಠಪಟ್ಟಿ ಎಂಬಲ್ಲಿ ಪೊಲೀಸರು ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next