Advertisement

ಮುರಳಿ ಫೋಟೋ “ಭರಾಟೆ’

06:13 PM Aug 11, 2018 | |

“ಮಫ್ತಿ’ ನಂತರ ಮುರಳಿ ಮುಂದೇನು ಮಾಡುತ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು ಈ ವರ್ಷದ ಯುಗಾದಿ ಹಬ್ಬದಂದು. “ಬಹದ್ದೂರ್‌’ ಚೇತನ್‌ ನಿರ್ದೇಶನದಲ್ಲಿ ಮುರಳಿ ಒಂದು ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಜಾಹೀರಾತು ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿತು.

Advertisement

“ಭರಾಟೆ’ ಚಿತ್ರದ ಸ್ಕ್ರಿಪ್ಟ್ ಪೂಜೆ ಕಳೆದ ತಿಂಗಳು ನಡೆದಿದ್ದು, ಇತ್ತೀಚೆಗೆ ಚಿತ್ರತಂಡದವರು ರಾಜಸ್ತಾನಕ್ಕೆ ಹೋಗಿ ಅಲ್ಲಿ ಫೋಟೋ ಶೂಟ್‌ ಮಾಡಿಕೊಂಡು ಬಂದಿದ್ದಾರೆ. ಅಲ್ಲಿನ ಅರಮನೆಗಳಲ್ಲಿ, ಮರಳುಗಾಡಿನಲ್ಲಿ ಮುರಳಿ ಮತ್ತು ನಾಯಕಿ ಶ್ರೀಲೀಲ ಅವರ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಛಾಯಾಗ್ರಾಹಕ ಭುವನ್‌ ಗೌಡ.

ಇದೀಗ ರಾಜಸ್ತಾನದಿಂದ ವಾಪಸ್ಸಾಗಿರುವ ಚಿತ್ರತಂಡದವರು, ಚಿತ್ರದ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಫೋಟೋ ಶೂಟ್‌ನ ಕೆಲವು ಫೋಟೋಗಳು ಇಲ್ಲಿವೆ. ಅಂದಹಾಗೆ, “ಭರಾಟೆ’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ರಾಜಸ್ತಾನದಲ್ಲಿ 21 ದಿನಗಳ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Advertisement

ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡ ಸದ್ಯದಲ್ಲೇ ರಾಜಸ್ತಾನಕ್ಕೆ ಪ್ರಯಾಣ ಬೆಳೆಸಲಿದೆ. “ಬಹದ್ದೂರ್‌’ ಚೇತನ್‌ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ರಚಿಸಿದ್ದಾರೆ. ಇನ್ನು ಈ ಚಿತ್ರವನ್ನು ಸುಪ್ರೀತ್‌ ನಿರ್ಮಿಸುತ್ತಿದ್ದಾರೆ. ಭುವನ್‌ ಗೌಡ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ, ದೀಪು ಎಸ್‌ ಕುಮಾರ್‌ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next