Advertisement

LS polls 2024: ಡಿ.ಕೆ.ಸುರೇಶ್‌ಗೆ ಹಸ್ತಲಾಘವ ನೀಡಿದ ಮುನಿರತ್ನ, ಕಾಲೆಳೆದ ಯೋಗೇಶ್ವರ್‌

08:36 PM Apr 04, 2024 | Team Udayavani |

ರಾಮನಗರ: ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಡಿ.ಕೆ.ಸುರೇಶ್‌ ಮತ್ತು ಅವರ ರಾಜಕೀಯ ಬದ್ಧ ವೈರಿಗಳಾದ ಬಿಜೆಪಿ ಮುಖಂಡರು ಮುಖಾಮುಖಿಯಾದ ಪ್ರಸಂಗ ಗುರುವಾರ ನಡೆಯಿತು.

Advertisement

ನಾಮಪತ್ರ ಸಲ್ಲಿಸಿ ಬರುತ್ತಿದ್ದ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಎದುರಾಗುತ್ತಿದ್ದಂತೆ ಡಿ.ಕೆ.ಸುರೇಶ್‌, “ಏನ್ರಿ ಶಾಸಕರೇ ಹೇಗಿದ್ದೀರಾ’ ಎಂದು ನಗುತ್ತಾ ಕೈಕುಲುಕಿದರು. ಇದಕ್ಕೆ ಪ್ರತಿಯಾಗಿ ಮುನಿರತ್ನ ಕೂಡ ಹಸ್ತಲಾಘವ ನೀಡಿದರು. ಅನಂತರ ಎದುರಾದ  ಬಿಜೆಪಿ ಅಭ್ಯರ್ಥಿ ಡಾ| ಮಂಜುನಾಥ್‌ ಅವರನ್ನು,  “ಹೇಗಿದ್ದೀರಾ? ಆರೋಗ್ಯ ಚೆನ್ನಾಗಿದೆಯಾ’ ಎಂದು  ಸುರೇಶ್‌ ಮಾತನಾಡಿಸಿದರು. ಇದಕ್ಕೆ ಪ್ರತಿಯಾಗಿ ಡಾ| ಮಂಜುನಾಥ್‌ ಕೂಡ ಸುರೇಶ್‌ ಅವರ ಯೋಗಕ್ಷೇಮ ವಿಚಾರಿಸಿದರು.

ಕಾಲೆಳೆದ ಯೋಗೇಶ್ವರ್‌:

ಇದೇ ಸಮಯದಲ್ಲಿ ಎದುರಾದ ಎಂಎಲ್‌ಸಿ ಯೋಗೇಶ್ವರ್‌ ಅವರು ಡಿ.ಕೆ.ಸುರೇಶ್‌ ಅವರ ಕೆನ್ನೆ ಸವರಿ  “ಏನಿದು ಇಷ್ಟೊಂದು ಕಪ್ಪಾಗಿ ಬಿಟ್ಟಿದ್ದೀಯಾ’ ಎಂದು ಕಾಲೆಳೆದರು. ಆದರೆ ಈ ಹಿಂದೆ ಇದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವೇದಿಕೆಯಲ್ಲೇ ಬೈದಾಡಿಕೊಂಡಿದ್ದ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಮಾತನಾಡಿಸುವ ಗೋಜಿಗೆ ಡಿ.ಕೆ.ಸುರೇಶ್‌ ಹೋಗಲಿಲ್ಲ.  ಅಶ್ವತ್ಥನಾರಾಯಣ ಕೂಡ ಮಾತನಾಡಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next