Advertisement

ಪುರಸಭೆ ಮೂವರು ಸದಸ್ಯೆಯರ ಸದಸ್ಯತ್ವ ರದ್ದು

09:21 PM May 22, 2021 | Team Udayavani |

ಮಹಾಲಿಂಗಪುರ: ಪಕ್ಷ ನೀಡಿದ ವಿಪ್‌ ಉಲ್ಲಂಘಿಸಿದ್ದ ಮಹಾಲಿಂಗಪುರ ಪುರಸಭೆ ಮೂವರು ಬಿಜೆಪಿ ಸದಸ್ಯೆಯರ ಸದಸ್ಯತ್ವವನ್ನು ಪಕ್ಷಾಂತರ ನಿಷೇಧ ನಿಯಮದಡಿ ರದ್ದುಗೊಳಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಶುಕ್ರವಾರ ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ನ. 9ರಂದು ನಡೆದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ವಿರೋಧಪಕ್ಷಕ್ಕೆ ಬೆಂಬಲ ನೀಡಿದ್ದರು. ಸದಸ್ಯತ್ವ ರದ್ದತಿಗೆ ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಸುಮಾರು 3-4 ತಿಂಗಳು ವಾದ ಪ್ರತಿವಾದ ನಡೆದು ಅಂತಿಮವಾಗಿ ವಿಪ್‌ ಉಲ್ಲಂಘನೆ ಸಾಬೀತಾದ ಕಾರಣ ಜಿಲ್ಲಾ ಧಿಕಾರಿಗಳು ಈ ಮೂವರು ಸದಸ್ಯೆಯರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪಕ್ಷ ದ್ರೋಹ ಮಾಡುವವರಿಗೆ ಇದೊಂದು ನೀತಿ ಪಾಠವಾಗಿದೆ. ಅಧಿಕಾರ ಶಾಶ್ವತವಲ್ಲ. ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವುದು ಮುಖ್ಯವಾಗಿದೆ. ಜಿಲ್ಲಾ ಧಿಕಾರಿಗಳ ಆದೇಶ ಸ್ವಾಗತಿಸುತ್ತೇವೆ ಎಂದರು. ಬಿಜೆಪಿ ಮುಖಂಡರಾದ ಕುಳ್ಳೋಳ್ಳಿ, ಶಿವಾನಂದ ಅಂಗಡಿ, ಮನೋಹರ ಶಿರೋಳ, ಜಿ.ಎಸ್‌.ಗೊಂಬಿ, ಶೇಖರ ಅಂಗಡಿ, ಪ್ರಕಾಶ ಅರಳಿಕಟ್ಟಿ, ಶಿವಬಸು ಗೌಂಡಿ, ಶಿವಲಿಂಗ ಘಂಟಿ, ಭೀಮಸಿ ಗೌಂಡಿ, ಶಂಖರಗೌಡ ಪಾಟೀಲ, ಆನಂದ ಖೋತ, ಬಸವರಾಜ ಚಮಕೇರಿ, ಮಹಾಲಿಂಗಪ್ಪ ಮುದ್ದಾಪುರ, ಶಿವಾನಂದ ಹುಣಶ್ಯಾಳ, ವಿಕ್ರಮ ಕುಳ್ಳೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next