Advertisement

Congress: ಮತ್ತೆ ಮುನಿಯಪ್ಪ ತ್ಯಾಗದ ಮಾತು

12:48 AM Aug 17, 2023 | Team Udayavani |

ಬೆಂಗಳೂರು: ಮುಂದಿನ ಎರಡೂವರೆ ವರ್ಷಗಳ ಬಳಿಕ ಹಿರಿಯ ನಾಯಕರು ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಬುಧವಾರ ಪುನರುಚ್ಚರಿಸಿ ರುವುದರೊಂದಿಗೆ. “ಅಧಿಕಾರ ಹಂಚಿಕೆ’ ಕುರಿತ ಚರ್ಚೆಗೆ ಮತ್ತೆ ಚಾಲನೆ ನೀಡಿದ್ದಾರೆ.

Advertisement

ಆದರೆ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ, ಆರ್‌.ಬಿ. ತಿಮ್ಮಾಪುರ, ಸಂತೋಷ್‌ ಲಾಡ್‌ ಸಹಿತ ಇನ್ನಿತರರು ಮುನಿಯಪ್ಪ ಅವರ ಹೇಳಿಕೆ ಯನ್ನು ವೈಯಕ್ತಿಕ ಅಭಿಪ್ರಾಯ ಎನ್ನುವ ಮೂಲಕ ಸಣ್ಣ ಅಸಮಾಧಾನ ಹೊರಹಾಕಿದ್ದಾರೆ.

“ಸಚಿವ ಸ್ಥಾನ ಬಿಟ್ಟುಕೊಡುವುದು, ಇಲ್ಲದೇ ಇರುವುದು ಅವರವರ ಸ್ವಂತಕ್ಕೆ ಬಿಟ್ಟ ಸಂಗತಿ.ಸಿಎಂ ಹಾಗೂ ಡಿಸಿಎಂ ಬದಲಾಗಬೇಕೇ ಬೇಡವೇ ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷದ ಮನೆಯೊಳಗೆ ಕಷ್ಟ-ಸುಖ ಮಾತನಾಡಿದ್ದೇವೆ. ಅದು ನನ್ನ ವೈಯಕ್ತಿಕ ಸಲಹೆ’ ಎಂದಿದ್ದಾರೆ ಮುನಿಯಪ್ಪ.

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌, ಎರಡೂವರೆ ವರ್ಷದ ಅನಂತರ ಬೇರೆಯವರಿಗೆ ಅವಕಾಶ ನೀಡುವಂತೆ ಕರೆ ನೀಡಿದ್ದರು. ಹಾಗಿದ್ದರೆ ಅದು ನಮಗೂ ಅನ್ವಯಿಸಲಿ ಎಂದು ಸಲಹೆ ಕೊಟ್ಟಿದ್ದೇನೆ. ಪ್ರಜಾತಂತ್ರ ದಲ್ಲಿ ಎಲ್ಲರಿಗೂ ಅವಕಾಶ ಸಿಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next