Advertisement

ಮುನೀಶ್‌ ಮೌದ್ಗಿಲ್‌ ಮತ್ತೆ ಆಯುಕ್ತ ಸ್ಥಾನಕ್ಕೆ

11:01 PM Sep 20, 2019 | Lakshmi GovindaRaju |

ಬೆಂಗಳೂರು: ಇತ್ತೀಚೆಗಷ್ಟೇ ಸರ್ವೇ ಮತ್ತು ಭೂ ದಾಖಲೆ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಗೊಂಡಿದ್ದ ಮುನೀಶ್‌ ಮೌದ್ಗಿಲ್‌ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಆಯುಕ್ತರಾಗಿದ್ದ ಮುನೀಶ್‌ ಮೌದ್ಗಿಲ್‌ ರಾಜ್ಯಾದ್ಯಂತ ಡ್ರೋಣ್‌ ಕ್ಯಾಮೆರಾ ಮೂಲಕ ಕಂದಾಯ ಭೂಮಿ ಸರ್ವೇ ಕಾರ್ಯ ಆರಂಭಿಸಿದ್ದರು. ರಾಜ್ಯಾದ್ಯಂತ ಕಂದಾಯ ಭೂಮಿ ಗುರುತಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

Advertisement

ಸಾರ್ವಜನಿಕರ ಜಮೀನು ಸರ್ವೇ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವ ವ್ಯವಸ್ಥೆ ತಂದಿದ್ದು. ಈ ನಡುವೆ ಅವರನ್ನು ಮೈಸೂರು ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಮೌದ್ಗಿಲ್‌ ವರ್ಗಾವಣೆ ಬೆನ್ನಲ್ಲೆ, ಪ್ರಸ್ತುತ ಸರ್ವೇ ಮತ್ತು ಭೂದಾಖಲೆ ಆಯುಕ್ತರಾಗಿದ್ದ ಉಜ್ವಲ್‌ ಕುಮಾರ್‌ ಘೋಷ್‌ ಅವರನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next