Advertisement

ಮುಂಡ್ಕೂರು-ಜಾರಿಗೆಕಟ್ಟೆ ಸರ್ಕಲ್‌: ಬ್ಯಾರಿಕೇಡ್‌ ತೆರವು

09:42 PM Jun 21, 2019 | Team Udayavani |

ಬೆಳ್ಮಣ್‌: ಮುಂಡ್ಕೂರು- ಜಾರಿಗೆಕಟ್ಟೆ ಸರ್ಕಲ್‌ನಲ್ಲಿ ಲೋಕಸಭೆಯ ಚುನಾವಣೆ ಸಂದರ್ಭ ನಿರ್ಮಿಸಲಾದ ವಾಹನ ತಪಾಸಣ ಕೇಂದ್ರ ಹಾಗೂ ಆಳವಡಿಸಲಾಗಿದ್ದ ಬ್ಯಾರಿಕೇಡ್‌ಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಜನಾಗ್ರಹದ ವರದಿಯನ್ನು ಉದಯವಾಣಿ ಪ್ರಕಟಿಸಿದ್ದ ಬೆನ್ನಲ್ಲೇ ಸ್ಪಂದಿಸಿದ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗಳು ಗುರುವಾರ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದಾರೆ.

Advertisement

ಕಾರ್ಕಳ ಪೊಲೀಸರ ಈ ಕ್ರಮ ಇದೀಗ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭ ಸುರಕ್ಷತೆಯ ದೃಷ್ಠಿಯಿಂದ ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಕೊನೆಯ ಭಾಗದ ಸರ್ಕಲ್‌ ಎನಿಸಿಕೊಂಡಿದ್ದ ಜಾರಿಗೆಕಟ್ಟೆಯಲ್ಲಿ ವಾಹನ ತಪಾಸಣ ಕೇಂದ್ರ ಹಾಗೂ ವಾಹನ ತಡೆಗೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಚುನಾವಣೆ ಮುಗಿದು 2 ತಿಂಗಳು ಕಳೆದಿದರೂ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯದೇ ಇದ್ದುದರಿಂದ ತೊಂದರೆ ಉಂಟಾಗಿತ್ತು. ಕೆಲವೊಂದು ಅಪಘಾತಗಳೂ ಸಂಭವಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next