Advertisement

Mundgod: ಪ್ರಭಾರಿ ಪಿಡಿಒ ನೇಣು ಬಿಗಿದುಕೊಂಡು ಆತ್ಮಹತ್ಯೆ

01:05 PM Dec 04, 2023 | Team Udayavani |

ಮುಂಡಗೋಡ: ಪ್ರಭಾರಿ ಪಿಡಿಒ ವೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಕೊಂಡ ಘಟನೆ ರಾಣೆಬೆನ್ನೂರು ತಾಲೂಕಿನ ಸನವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸಂಭವಿಸಿದೆ.

Advertisement

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಪ್ರಭಾರಿ ಪಿಡಿಒ.ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಆತ್ಮಹತ್ಯ ಮಾಡಿಕೊಂಡ ವ್ಯಕ್ತಿ.

ಡಿ.3ರ ರವಿವಾರ ಪಿಡಿಓ ರಜೆ ಇರುವುದರಿಂದ ತನ್ನ ತೋಟಕ್ಕೆ ಬಂದಿದ್ದ. ಆದರೆ ಸೋಮವಾರ ಆತ ತನ್ನ ತೋಟದಲ್ಲಿಯೇ ನೇಣಿಗೆ ಶರಣಾಗಿದ್ದು, ಬೆಳಕಿಗೆ ಬಂದಿದೆ.

ಈತ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲ ತೀರಿಸಲಾಗದೇ ಈತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next