Advertisement

ಶಿವಮೊಗ್ಗ: ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಭದ್ರಾವತಿ ನಗರ ಸಭೆಯ ಗುಮಾಸ್ತ

07:33 PM Aug 13, 2020 | mahesh |

ಶಿವಮೊಗ್ಗ: ಸೈಟ್​​​ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚ ಪಡೆಯುವಾಗ ಭದ್ರಾವತಿ ನಗರ ಸಭೆಯ ಗುಮಾಸ್ತ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಭದ್ರಾವತಿ ನಗರಸಭೆಯ ಗುಮಾಸ್ತ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಇವರು ಭದ್ರಾವತಿ ಹೊರ ವಲಯದ ಬೊಮ್ಮನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲೇಔಟ್​​ನಲ್ಲಿನ ಸೈಟ್ ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು.

ಈ ಕುರಿತು ಸುಲ್ತಾಬ್ ಶರೀಫ್ ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ಇನ್ಸ್​​ಪೆಕ್ಟರ್​​ಗಳಾದ ತಿಪ್ಪೇಸ್ವಾಮಿ, ವಿರೇಂದ್ರ ಹಾಗೂ ಸಿಬ್ಬಂದಿಗಳಾದ ಯೋಗೀಶ್, ರಘು, ನಾಗರಾಜ್ ಸೇರಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next