Advertisement

ಕರ್ನಾಟಕ ದಾಳಿಗೆ ಉದುರಿದ ಮುಂಬಯಿ

11:06 PM Jan 03, 2020 | Team Udayavani |

ಮುಂಬಯಿ: ಮುಂಬಯಿ ವಿರುದ್ಧ ಶುಕ್ರವಾರ ಅವರದೇ ಅಂಗಳದಲ್ಲಿ ಆರಂಭಗೊಂಡ ಹೊಸ ವರ್ಷದ ಮೊದಲ ರಣಜಿ ಪಂದ್ಯವನ್ನು ಕರ್ನಾಟಕ ಉತ್ತಮ ರೀತಿಯಲ್ಲಿ ಆರಂಭಿಸಿದೆ. ಮುಂಬಯಿಯನ್ನು ಕೇವಲ 194 ರನ್‌ಗೆ ಉರುಳಿಸುವ ಮೂಲಕ ಅಮೋಘ ನಿಯಂತ್ರಣ ಸಾಧಿಸಿದೆ.

Advertisement

“ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌’ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿದ ಮುಂಬಯಿ ಸರದಿ ಮೇಲೆ ಕರ್ನಾಟಕದ ಬೌಲರ್‌ಗಳು ಘಾತಕವಾಗಿ ಎರಗಿದರು. ವೇಗಿಗಳಾದ ವಿ. ಕೌಶಿಕ್‌ (45ಕ್ಕೆ 3), ಅಭಿಮನ್ಯು ಮಿಥುನ್‌ (48ಕ್ಕೆ 2), ರೋನಿತ್‌ ಮೋರೆ (47ಕ್ಕೆ 2) ಹಾಗೂ ಪ್ರತೀಕ್‌ ಜೈನ್‌ (20ಕ್ಕೆ 2) ಬಿಗು ಬೌಲಿಂಗ್‌ ದಾಳಿಗೆ ಸಿಲುಕಿದ ಮುಂಬಯಿ 55.5 ಓವರ್‌ಗಳಲ್ಲಿ ಸರ್ವಪತನ ಕಂಡಿತು.

ಮೊದಲ ದಿನದ ಆಟದ ಅಂತ್ಯಕ್ಕೆ ಕರ್ನಾಟಕ 3 ವಿಕೆಟಿಗೆ 79 ರನ್‌ ಮಾಡಿದೆ. ಆರಂಭಿಕ ವಿಕೆಟಿಗೆ ಆರ್‌. ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್‌ 19.3 ಓವರ್‌ಗಳಿಂದ 68 ರನ್‌ ಜತೆಯಾಟ ನಡೆಸಿದರೂ ಅನಂತರ ದಿಢೀರ್‌ ಕುಸಿತಕ್ಕೆ ಸಿಲುಕಿತು. ಸಮರ್ಥ್ 40 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇವರೊಂದಿಗೆ ಖಾತೆ ತೆರೆಯದ ಕಪ್ತಾನ ಕರುಣ್‌ ನಾಯರ್‌ ಇದ್ದಾರೆ. ದೇವದತ್ತ ಪಡಿಕ್ಕಲ್‌ 32 ರನ್‌ ಮಾಡಿದರೆ, ಅಭಿಷೇಕ್‌ ರೆಡ್ಡಿ (0) ಹಾಗೂ ರೋಹನ್‌ ಕದಮ್‌ (4 ರನ್‌) ಬೇಗನೆ ಪೆವಿಲಿಯನ್‌ ಸೇರಿಕೊಂಡರು.
ಶಮ್ಸ್‌ ಮಲಾನಿ (13ಕ್ಕೆ 2) ಮತ್ತು ಶಶಾಂಕ್‌ ಅಟ್ಟರ್ಡೆ (14ಕ್ಕೆ 1) ವಿಕೆಟ್‌ ಹಂಚಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವುದು ಕರ್ನಾಟಕದ ಸದ್ಯದ ಗುರಿ.

ಪೃಥ್ವಿ ಶಾ, ರಹಾನೆ ವಿಫ‌ಲ
ಕಳೆದ ಪಂದ್ಯದಲ್ಲಿ ತವರಿನ ವಾಂಖೇಡೆ ಅಂಗಳ ದಲ್ಲಿ ರೈಲ್ವೇಸ್‌ಗೆ 10 ವಿಕೆಟ್‌ಗಳಿಂದ ಶರಣಾಗಿದ್ದ ಮುಂಬಯಿ, ಈ ಮುಖಾಮುಖೀಯಲ್ಲೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತು.

ಆರಂಭಕಾರ ಆದಿತ್ಯ ತಾರೆ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಟೆಸ್ಟ್‌ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ (7), ಸಿದ್ದೇಶ್‌ ಲಾಡ್‌ (4) ಹಾಗೂ ಪೃಥ್ವಿ ಶಾ (29) ವಿಕೆಟ್‌ 46 ರನ್‌ ಆಗುವಷ್ಟರಲ್ಲಿ ಉರುಳಿತು. ಸಫ‌ìರಾಜ್‌ ಖಾನ್‌ (8), ಶಮ್ಸ್‌ ಮುಲಾನಿ (0) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. 60 ರನ್ನಿಗೆ ಮುಂಬಯಿಯ 6 ವಿಕೆಟ್‌ ಹಾರಿ ಹೋಯಿತು.

Advertisement

ಆದರೆ ನಾಯಕ ಸೂರ್ಯಕುಮಾರ್‌ ಯಾದವ್‌ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ರಕ್ಷಣೆಗೆ ನಿಂತರು. ಅವರಿಗೆ ಶಶಾಂಕ್‌ ಅಟ್ಟರ್ಡೆ ಉತ್ತಮ ಬೆಂಬಲವಿತ್ತರು. 7ನೇ ವಿಕೆಟಿಗೆ 88 ರನ್‌ ಒಟ್ಟುಗೂಡಿತು. ಯಾದವ್‌ 94 ಎಸೆತಗಳಿಂದ 77 ರನ್‌ ಮಾಡಿದರು (10 ಬೌಂಡರಿ, 2 ಸಿಕ್ಸರ್‌). ಯಾದವ್‌ ಹೊರತುಪಡಿಸಿದರೆ 35 ರನ್‌ ಮಾಡಿದ ಶಶಾಂಕ್‌ ಅವರದೇ ಹೆಚ್ಚಿನ ಗಳಿಕೆ.

ಕೇರಳ ಬ್ಯಾಟಿಂಗ್‌ ಕುಸಿತ
ಹೈದರಾಬಾದ್‌, ಜ. 3: ಹೈದರಾಬಾದ್‌ ಮತ್ತು ಕೇರಳ ನಡುವಿನ ರಣಜಿ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 41 ಓವರ್‌ಗಳ ಆಟವಷ್ಟೇ ನಡೆದಿದ್ದು, ಕೇರಳ 7 ವಿಕೆಟಿಗೆ 126 ಮಾಡಿದೆ. ಇದರಲ್ಲಿ 20 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿದೆ.

ರವಿ ಕಿರಣ್‌ (24ಕ್ಕೆ 3) ಮತ್ತು ಮೊಹಮ್ಮದ್‌ ಸಿರಾಜ್‌ (36ಕ್ಕೆ 2) ತವರಿನಂಗಳದ ಲಾಭವೆತ್ತಿದರು. ಕೇರಳ 32ಕ್ಕೆ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ನಾಯಕ ಸಚಿನ್‌ ಬಾಬಿ 29, ಸಲ್ಮಾನ್‌ ನಜೀರ್‌ 37 ರನ್‌ ಮಾಡಿ ಸಣ್ಣ ಮಟ್ಟದ ಹೋರಾಟ ಪ್ರದರ್ಶಿಸಿದರು.

ಸಂಕ್ಷಿಪ್ತ ಸ್ಕೋರ್‌
ಮುಂಬಯಿ-194 (ಯಾದವ್‌ 77, ಅಟ್ಟರ್ಡೆ 35, ಶಾ 29, ತುಷಾರ್‌ 10, ಕೌಶಿಕ್‌ 45ಕ್ಕೆ 3, ಪ್ರತೀಕ್‌ 20ಕ್ಕೆ 2, ಮೋರೆ 47ಕ್ಕೆ 2, ಮಿಥುನ್‌ 48ಕ್ಕೆ 2, ಗೋಪಾಲ್‌ 24ಕ್ಕೆ 1). ಕರ್ನಾಟಕ-3 ವಿಕೆಟಿಗೆ 79 (ಸಮರ್ಥ್ ಬ್ಯಾಟಿಂಗ್‌ 40, ಪಡಿಕ್ಕಲ್‌ 32, ಕದಮ್‌ 4, ರೆಡ್ಡಿ 0, ನಾಯರ್‌ ಬ್ಯಾಟಿಂಗ್‌ 0, ಮುಲಾನಿ 13ಕ್ಕೆ 2, ಅಟ್ಟರ್ಡೆ 14ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next