Advertisement

ಇರಾಕ್‌ ಯಾತ್ರೆಗೆ ತೆರಳಿದ್ದ ಮುಂಬಯಿಯ ಈರ್ವರು ಯುವಕರು ನಾಪತ್ತೆ

04:56 PM Feb 22, 2017 | |

 ಮುಂಬಯಿ: ಕಳೆದ ತಿಂಗಳು  ಇರಾಕ್‌ಗೆ ಯಾತ್ರೆಗೆಂದು ತೆರಳಿದ್ದ  ಈರ್ವರು ಯುವಕರು  ಇರಾಕ್‌ ತಲುಪಿದ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. 

Advertisement

ಇದೀಗ ನಾಪತ್ತೆಯಾಗಿರುವರೆನ್ನಲಾಗಿರುವ ಈ ಈರ್ವರು ಯುವಕರಿಗಾಗಿ  ರಾಜ್ಯದ ಭಯೋತ್ಪಾದನ ನಿಗ್ರಹ ದಳ ಶೋಧ ಕಾರ್ಯ ಆರಂಭಿಸಿದೆ.

 ಇರಾಕ್‌ ರಾಜಧಾನಿ ಬಗ್ಧಾದ್‌ನಲ್ಲಿರುವ ಸೂಫಿ ಸಂತ ಅಬ್ದುಲ್‌ ಖಾದಿರ್‌ ಜಿಲಾನಿ ಅವರ ಸಮಾಧಿಗೆ  ಪ್ರಾರ್ಥನೆ ಸಲ್ಲಿಸಲೆಂದು  ನಗರದ  ಟೂರ್‌ ಕಂಪನಿಯೊಂದರ  ಆಶ್ರಯದಲ್ಲಿ  ಜನವರಿಯಲ್ಲಿ  ತೆರಳಿದ್ದ  ಎರಡು ತಂಡಗಳಲ್ಲಿ ಈ ಯುವಕರಿದ್ದರು. ಆದರೆ ಇರಾಕ್‌ಗೆ ತಲುಪಿದ ಬಳಿಕ ಇವರೀರ್ವರು  ಟೂರ್‌ ಕಂಪನಿ  ಮತ್ತು ಕುಟುಂಬದವರ  ಸಂಪರ್ಕವನ್ನು  ಕಡಿದುಕೊಂಡಿದ್ದರು.  

ಪ್ರಕರಣದ  ಸಂಬಂಧ ತನಿಖೆಯನ್ನು  ಕೈಗೆತ್ತಿಕೊಂಡಿರುವ ಎಟಿಎಸ್‌ ದಕ್ಷಿಣ ಮುಂಬಯಿನಲ್ಲಿರುವ  ಟೂರ್‌ ಕಂಪನಿ ಮತ್ತು ಮುಂಬಯಿ ವಿಮಾನ ನಿಲ್ದಾಣದಿಂದ  ಈ ಯುವಕರ  ಬಗೆಗೆ ಮಾಹಿತಿಗಳನ್ನು ಪಡೆದುಕೊಂಡಿದೆ. 

ಮೂಲತಃ ಈ  ಯುವಕರು  ಪಶ್ಚಿಮಬಂಗಾಳದವರೆನ್ನಲಾಗಿದ್ದು  ನಗರದಲ್ಲಿ  ವಾಸವಾಗಿದ್ದರೇ? ಎಂಬ  ಬಗೆಗೆ  ಖಚಿತ ಮಾಹಿತಿ ಲಭಿಸಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next