Advertisement

Mumbai: ಸಿದ್ಧಿಕಿಗೆ ದಾವೂದ್‌ ಸಂಪರ್ಕ ಇದ್ದಿದ್ದಕ್ಕೆ ಹ*ತ್ಯೆ: ಬಿಷ್ಣೋಯ್‌ ಗ್ಯಾಂಗ್‌ ಸದಸ್ಯ

03:48 AM Oct 20, 2024 | Team Udayavani |

ಮುಂಬೈ: ‘ಬಾಬಾ ಸಿದ್ಧಿಕಿ ಒಳ್ಳೆಯ ಮನುಷ್ಯ ಅಲ್ಲ, ಅವರಿಗೆ ದಾವೂದ್‌ ಇಬ್ರಾಹಿಂ ಜತೆ ಸಂಪರ್ಕ ಇತ್ತು. ಅದಕ್ಕಾಗಿ ಅವರನ್ನು ಕೊಲ್ಲಲಾಯಿತು’ ಎಂದು ಬಿಷ್ಣೋಯ್‌ ಗ್ಯಾಂಗ್‌ನ ಸದಸ್ಯನೊಬ್ಬ ಆಘಾತಕಾರಿ ಹೇಳಿಕೆ ನೀಡಿದ್ದಾನೆ.

Advertisement

ಇತ್ತೀಚೆಗೆ ಉತ್ತರಪ್ರದೇಶದ ಮಥುರಾದಲ್ಲಿ ಬಂಧನಕ್ಕೊಳಗಾದ ಯೋಗೇಶ್‌ ದೆಹಲಿಯ ಜಿಮ್‌ ಮಾಲೀಕನ ಹತ್ಯೆ ಆರೋಪಿ. “ಸಿದ್ಧಿಕಿ ವಿರುದ್ಧ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದಾವೂದ್‌ ಜತೆ ಸಂಪರ್ಕ ಇತ್ತು. ಹಾಗಾಗಿ ಕೊಲ್ಲಲಾಯಿತು’ ಎಂದು ಪೊಲೀಸರ ವಿಚಾರಣೆ ವೇಳೆ ಆತ ಮಾಹಿತಿ ನೀಡಿದ್ದಾರೆ.

50 ಲಕ್ಷ ಬೇಡಿಕೆ:
ಈ ನಡುವೆ, ಶುಕ್ರವಾರ ಬಂಧಿತರಾದ 5 ಆರೋಪಿಗಳು ಸಿದ್ಧಿಕಿ ಹತ್ಯೆಗೆ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದರು. ಆದರೆ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ, ಸಿದ್ದಿಕಿಯವರು ರಾಜಕೀಯವಾಗಿ ಪ್ರಭಾವಯುತವಾಗಿದ್ದರಿಂದ ಹಿಂದೆ ಸರಿದಿದ್ದರು. ಬಳಿಕ ಶೂಟರ್‌ಗಳಿಗೆ ವಾಹನ ಮತ್ತಿತರ ವಸ್ತುಗಳ ಪೂರೈಕೆಗೆ ಸಹಾಯ ಮಾಡಲು ಒಪ್ಪಿದ್ದರು ಎನ್ನಲಾಗಿದೆ.

ಈ ನಡುವೆ, ತನಿಖೆಯಲ್ಲಿ ಶೂಟರ್‌ ಒಬ್ಬನ ಸ್ನ್ಯಾಪ್‌ಚಾಟ್‌ ಖಾತೆಯಲ್ಲಿ ಸಿದ್ಧಿಕಿ ಪುತ್ರ ಝೀಶಾನ್‌ ಫೋಟೋ ಸಿಕ್ಕಿದೆ. ಸಾಕ್ಷ್ಯಗಳು ಉಳಿಯಬಾರದೆಂದು ಆರೋಪಿಗಳು ಸ್ನ್ಯಾಪ್‌ಚಾಟ್‌ ಮೂಲಕ ಸಂಪರ್ಕಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next