Advertisement

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

08:08 PM Apr 16, 2024 | Team Udayavani |

ಮುಳ್ಳೇರಿಯ: ಕುಟುಂಬ ಸದಸ್ಯರೊಂದಿಗೆ ವಿಷು ಆಚರಣೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ವ್ಯಕ್ತಿ ದಾರಿಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆಯ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Advertisement

ಮೃತದೇಹದ ಪರೀಕ್ಷೆಯಲ್ಲಿ ತಲೆಗೆ ಗಂಭೀರ ಗಾಯವಾಗಿರುವುದರಿಂದ ರಕ್ತ ಹರಿದು ಸಾವಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಇದೇ ವೇಳೆ ವ್ಯಕ್ತಿಯ ಅಂಗಿ ಬದಲಾಗಿರುವುದು ಕೂಡ ನಿಗೂಢತೆಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಧರಿಸಿದ ಶರ್ಟ್‌ಗೂ ಮೃತದೇಹದಲ್ಲಿ ಇದ್ದ ಶರ್ಟ್‌ಗೂ ವ್ಯತ್ಯಾಸವಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ವಿಷು ದಿನದಂದು ರಾತ್ರಿ 10 ಗಂಟೆಯವರೆಗೆ ಸಹೋದರನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೋವಿಕ್ಕಾನ ಇರಿಂಜೇರಿ ಚಕ್ಲಿಯ ಕಾಲನಿ ನಿವಾಸಿ ಪದ್ಮನಾಭ (60) ತನ್ನ ಮನೆಗೆ ವಾಪಸಾಗುವ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next