Advertisement

Mulki: ನದಿಗೆ ಹಾರಿದ್ದ ವ್ಯಕ್ತಿಯ ಶವ ಪತ್ತೆ

07:03 PM Sep 15, 2024 | Team Udayavani |

ಮೂಲ್ಕಿ: ಶುಕ್ರವಾರ ಮೂಲ್ಕಿ ಶಾಂಭವಿ ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಕೊಳಚಿಕಂಬಳ ಬಳಿ ಪತ್ತೆಯಾಗಿದೆ.

Advertisement

ಕಾರ್ನಾಡು ಸದಾಶಿವ ರಾವ್‌ ನಗರದ ನಿವಾಸಿ ಶೀನ ಮೇಸ್ತ್ರಿ (65) ಅವರು ಅನಾರೋಗ್ಯದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿವುದಾಗಿ ತಿಳಿದುಬಂದಿದೆ.

ಶುಕ್ರವಾರ ನದಿಗೆ ಹಾರಿರುವುದನ್ನು ನೋಡಿದ್ದ ವ್ಯಕ್ತಿಗಳ ಮಾಹಿತಿಯಂತೆ ಹುಡುಕಾಟ ನಡಸಿದರೂ, ಶವ ಪತ್ತೆಯಾಗಿರಲಿಲ್ಲ. ಶನಿವಾರ ಮೀನುಗಾರರು ನೀರಿನಲ್ಲಿ ತೇಲುತ್ತಿದ್ದ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next