Advertisement

ಜುಲೈ 1ರಂದು ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ನಡೆಯಲಿದೆ ತಪ್ತಮುದ್ರಾಧಾರಣೆ

01:07 PM Jun 24, 2020 | Team Udayavani |

ಉಡುಪಿ ; ಈ ಬಾರಿ ಜುಲೈ 1ರಂದು ಆಷಾಢ ಶುದ್ಧ ಏಕಾದಶಿಯಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ತಪ್ತಮುದ್ರಾಧಾರಣೆ ನಡೆಯಲಿದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರೀಯ ಶ್ರೀಪಾದರು ತಿಳಿಸಿದ್ದಾರೆ.

Advertisement

ಮಾಧ್ಯಮದ ಜೊತೆ ಮಾತನಾಡಿದ ಶ್ರೀಪಾದರು ಸಾರ್ವಜನಿಕರಿಗಾಗಿ ಮುಂದಿನ ಯಾವುದಾದರು ಒಂದು ಶುಭ ದಿನದಂದು ಮುದ್ರಾ ಧಾರಣೆಯನ್ನು ನಡೆಸುವುದಾಗಿ ಹೇಳಿದರು.

ಜೂನ್ 30 ರಂದು ಶ್ರೀ ಕೃಷ್ಣ ಮಠದಲ್ಲಿ ದೇವರಿಗೆ ಎಂದಿನಂತೆ ವಾರ್ಷಿಕವಾಗಿ ಮಹಾಭಿಷೇಕ( ಸಿಯಾಳ ಅಭಿಷೇಕ ) ಜರುಗಲಿದ್ದು ಆದರೆ ಕೋವಿಡ್ 19 ಸೋಂಕಿನಿಂದಾಗಿ ಭಕ್ತರಿಗೆ ಮಠಕ್ಕೆ ಪ್ರವೇಶ ಇಲ್ಲವಾಗಿದ್ದರಿಂದ, ದೇವರಿಗೆ ಅಭಿಷೇಕ ಮಾಡಲು ಸಿಯಾಳ ನೀಡುವ ಭಕ್ತರು ಜೂನ್ 28ರ ಸಂಜೆ ಒಳಗೆ ರಾಜಾಂಗಣದ ಉತ್ತರ ದ್ವಾರದ ಬಳಿ ನೀಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next