Advertisement

ಕೇರಳ ಜಲಪ್ರವಾಹದಲ್ಲಿ ಸಿಲುಕಿದ್ದ ಮುಡಿಪು ಮೂಲದ ತಂಡ ಪಾರು

12:05 PM Aug 20, 2018 | Harsha Rao |

ಉಳ್ಳಾಲ: ಕೇರಳದ ಚಾಲಕ್ಕುಡಿಯ ಡಿವೈನ್‌ ರಿಟ್ರೀಟ್‌ನಲ್ಲಿ ಧ್ಯಾನ ಶಿಬಿರಕ್ಕೆ ತೆರಳಿ ಜಲಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮುಡಿಪು ಮೂಲದ 8 ಜನರ ತಂಡ ಸೇರಿದಂತೆ ಮಂಗಳೂರಿನ 16 ಮಂದಿ ಸುರಕ್ಷಿತವಾಗಿ ರವಿವಾರ ರಾತ್ರಿ ಮಂಗಳೂರಿಗೆ ತಲುಪಿದ್ದಾರೆ.

Advertisement

ಮುಡಿಪು ಸಮೀಪದ ಕಂಬಳಪದವು ನಿವಾಸಿ ರವಿ ಕುಟಿನ್ಹಾ, ವಿಟ್ಲ ವಿಜಯಡ್ಕದ ಓರ್ವ ಮಹಿಳೆ ಸಹಿತ ಇಬ್ಬರು ಮಕ್ಕಳು ಕಳೆದ ಶನಿವಾರ ಕೇರಳದ ಚಾಲಕ್ಕುಡಿಯ ರಿಟ್ರೀಟ್‌ ಸೆಂಟರ್‌ಗೆ ತೆರಳಿದ್ದರು. ಈ ತಂಡ ತಂಗಿದ್ದ ಕಟ್ಟಡದ ಎರಡು ಅಂತಸ್ತುಗಳು ಮಂಗಳವಾರ ರಾತ್ರಿ ಮುಳುಗಿದ್ದವು. ಮೂರು ದಿನಗಳ ಕಾಲ ಆಹಾರ ಇಲ್ಲದೆ ಅತಂತ್ರವಾಗಿದ್ದ ತಂಡ ಶನಿವಾರ ಬೆಳಗ್ಗೆ ನೀರು ಕಡಿಮೆಯಾಗುತ್ತಿದ್ದಂತೆ ಪಾರಾಗಿ ರವಿವಾರ ಮಂಗಳೂರು ತಲುಪಿದೆ.

ಘಟನೆ  ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ರವಿ ಕುಟಿನ್ಹಾ, ಮಂಗಳೂರು ಕಡೆಗೆ ಯಾವುದೇ ಖಾಸಗಿ ವಾಹನ ಬರಲು ಒಪ್ಪುತ್ತಿರ ಲಿಲ್ಲ. ಈ ಸಂದರ್ಭ ಸಚಿವ ಯು.ಟಿ. ಖಾದರ್‌ಗೆ ಮಾಹಿತಿ ನೀಡಿದ್ದು, ಅವರ ಸೂಚನೆಯಂತೆ ಕೆಎಸ್ಸಾರ್ಟಿಸಿ ವಿಶೇಷ ಬಸ್‌ ಮೂಲಕ ನಮ್ಮನ್ನು ಕಳಿಸಿಕೊಟ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next