Advertisement

ಮೂಡಿಗೆರೆ: ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನೀರುಪಾಲು

10:42 PM Aug 05, 2023 | Team Udayavani |

ಮೂಡಿಗೆರೆ : ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಶನಿವಾರ ನಡೆದಿದೆ.

Advertisement

ವರ್ಷದ ತನ್ಮಯಿ ಮತ್ತು ಕಿಶೋರ್ ಮೃತ ದುರ್ದೈವಿಗಳು. ಒಟ್ಟು ಮೂವರು ಬಾಲಕರು ತೆರಳಿದ್ದು ಓರ್ವ ಬಾಲಕ ಹರಸಾಹಸ ಪಟ್ಟು ಪಾರಾಗಿ ಬರುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next