Advertisement

ಗುತ್ತಿಗೆದಾರರಿಂದ ಕ್ಷೇತ್ರದ ಅಭಿವೃದ್ಧಿಗೆ ತೊಡಕು

07:32 PM May 10, 2020 | Team Udayavani |

ಮೂಡಿಗೆರೆ: ಕ್ಷೇತ್ರದ ಅಭಿವೃದ್ಧಿಗೆಂದು ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡಲು ಕೆಲ ಗುತ್ತಿಗೆದಾರರು ತೊಡಕಾಗಿದ್ದಾರೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕ್ಷೇತ್ರದ ಅಭಿವೃದ್ಧಿಗೆ 17 ಕೋ.ರೂ. ಬಿಡುಗಡೆ ಮಾಡಿದ್ದಾರೆ. ಆ ನಂತರದಲ್ಲಿ 2019-20ರ ಅವಧಿಯಲ್ಲಿ 19 ಕೋಟಿ ಅನುದಾನ, ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 19 ಕೋಟಿ, ಪ್ರಧಾನಿ ಗ್ರಾಮ್‌ ಸಡಕ್‌ ಯೋಜನೆಯಿಂದ 36 ಕೋಟಿ, ಅತಿವೃಷ್ಟಿ ಅಭಿವೃದ್ಧಿ ಕಾಮಗಾರಿಗಾಗಿ 20 ಕೋಟಿ. ಬಂಕೇನಹಳಿ, ಮಾಳಿಂಗನಾಡು, ಮುಗ್ರಹಳ್ಳಿ ಸೇತುವೆ ಕಾಮಗಾರಿಗಾಗಿ 8 ಕೋಟಿ. ಭಾರೀ ಮಳೆಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ 6 ಕೋಟಿ ಸೇರಿದಂತೆ ಹಲವಾರು ಸರ್ಕಾರದಿಂದ ಅನುದಾನ ನೀಡಲಾಗಿದೆ. ಆದರೆ ಕ್ಷೇತ್ರದಲ್ಲಿರುವ ಕೆಲವು ಗುತ್ತಿಗೆದಾರರು ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದ್ದಾರೆ. ಕೆಲವು ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಆದೇಶ ಪ್ರತಿಗಳು ಗುತ್ತಿಗೆದಾರರ ಕೈ ಸೇರಿದ್ದರೂ ಕಾಮಗಾರಿಗಳ ಕಾರ್ಯ ಆರಂಭಿಸಿಲ್ಲ. ಇದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಗುತ್ತಿಗೆದಾರರ ವಿರುದ್ಧ ಆರೋಪಿಸಿದ್ದಾರೆ.

64 ಕೋಟಿ ರೂ. ಟೆಂಡರ್‌ ಪ್ರಕ್ರಿಯೆ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದ್ದು, ಇಂಥ ಕೆಲವು ಗುತ್ತಿಗೆದಾರರು ಪುನಃ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯುಂಟಾಗುತ್ತದೆ. ಕಾಮಗಾರಿ ಕೆಲಸ ನಿರ್ವಹಿಸದ ಕೆಲ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಕು ಉಂಟುಮಾಡುವ ಯಾವುದೇ ಷಡ್ಯಂತ್ರಗಳಿಗೆ ಬೆದರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next