Advertisement

ಕೋವಿಡ್ ಎಫೆಕ್ಟ್ : ಸರಳ ವಿವಾಹ

03:11 PM Apr 23, 2020 | Naveen |

ಮೂಡಿಗೆರೆ: ತಾಲೂಕಿನ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಆನೆದಿಬ್ಬ ಗ್ರಾಮದ ವೈಶಾಲಿ ಹಾಗೂ ಶೃಂಗೇರಿಯ ಕಿಗ್ಗಾದ ಅರವಿಂದ್‌ ಅವರ ವಿವಾಹ ಇಲ್ಲಿನ ಗೋಣಿಬೀಡು ಹನುಮಂತ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.

Advertisement

ವಿವಾಹವನ್ನು ಜನ್ನಾಪುರದ ವರ್ತಕರ ಭವನದಲ್ಲಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ಮದುವೆಯನ್ನು ಸರಳವಾಗಿ ಆಚರಣೆ ಮಾಡುವದು ಸೂಕ್ತ ಎನ್ನುವ ಹಿರಿಯ ಅಭಿಪ್ರಾಯದಂತೆ ಸೋಮವಾರ ಸರಳವಾಗಿ ನಡೆಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಜನಾರ್ಧನ ಹೆಬ್ಟಾರ್‌ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.

ದೇವಾಲಯದ ಸಮಿತಿ ಅಧ್ಯಕ್ಷ ಕೆ.ಟಿ. ಜಗದೀಶ್‌, ಪದಾ ಧಿಕಾರಿ ವಿ.ಕೆ. ಶಿವೇಗೌಡ ಹಾಗೂ ವಧು-ವರರ ಕುಟುಂಬದ ಕೆಲವೇ ಸದಸ್ಯರು ಮಾತ್ರ
ಕಾರ್ಯಕ್ರಮದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next