Advertisement

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

07:05 PM Aug 06, 2024 | Team Udayavani |

ಮುಧೋಳ : ಶ್ರೀಗಂಧ ಮರ ಕಡಿದು ಗಂಧದ ತುಂಡುಗಳನ್ನು ಕಳ್ಳತನ‌‌ ಮಾಡಲೆತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತರನ್ನು ಅಣ್ಣಿಗೇರಿ ಮೂಲದ ರಾಘವೇಂದ್ರ‌ ಹರಣಶಿಕಾರಿ ಹಾಗೂ ನಾರಾಯಣ ಹರಣಶಿಕಾರಿ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 107 ಕೆ.ಜಿ. ಶ್ರೀಗಂಧದ ತುಂಡನ್ನು ವಶಕ್ಕೆ‌ ಪಡೆಯಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮೃತ ಗಂಡೋಸಿ ಅವರ ಮಾರ್ಗದರ್ಶನದಲ್ಲಿ ನಡೆದ ಬಂಧಿತ ಕಾರ್ಯಚರಣೆ ತಂಡದಲ್ಲಿ ವಲಯ ಅರಣ್ಯಾಧಿಕಾರಿ ಶಿವಪುತ್ರ ತಳವಾರ, ಉಪವಲಯ ಅರಣ್ಯಾಧಿಕಾರಿ‌‌ ರಮೇಶ ಮೆಟಗುಡ್ಡ ಅರಣ್ಯ ಪಾಲಕರಾದ ಚಂದ್ರಶೇಖರ, ಆನಂದ ಸಾಗರ, ಆನಂದ ಹವಳ್ಯಾಗೋಳ ಹಾಗೂ ಅರಣ್ಯ ಇಲಾಳೆ‌ ಸಿಬ್ಬಂದಿ ಪಾಲ್ಗೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next