Advertisement

600 ಲೀ. ಬೆಲ್ಲದ ಕೊಳೆ ನಾಶ: ಇಬ್ಬರ ಬಂಧನ

01:45 PM Apr 26, 2020 | Naveen |

ಮುದಗಲ್ಲ: ಜಕ್ಕರಮಡು ತಾಂಡಾಕ್ಕೆ ದಾಳಿ ಮಾಡಿದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು 600 ಲೀ. ಬೆಲ್ಲದ ಕೊಳೆ ಮತ್ತು 100 ಕ್ವಿಂಟಲ್‌ ಬೆಲ್ಲ ನಾಶಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಮಸ್ಕಿ ಸಿಪಿಐ ದೀಪಕ ಭೂಸರಡ್ಡಿ ಹಾಗೂ ಅಬಕಾರಿ ಡಿಎಸ್‌ಪಿ ಮೈನುದ್ದೀನ್‌ ನೇತೃತ್ವದಲ್ಲಿ ಜಂಟಿ ದಾಳಿ ನಡೆಲಾಯಿತು. 150 ಬಿಂದಿಗೆಗಳಲ್ಲಿ ತುಂಬಿ ಇಟ್ಟಿದ್ದ 600 ಲೀಟರ್‌ ಬೆಲ್ಲದ ಕೊಳೆ, 18 ಬ್ಯಾಗ್‌ ಬೆಲ್ಲ ವಶಕ್ಕೆ ಪಡೆದು ಅದನ್ನು ಸ್ಥಳದಲ್ಲೇ ನಾಶ ಮಾಡಿದರು ಹಾಗೂ ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಕಾಳಪ್ಪ ಪುಲ್ಲಪ್ಪ ರಾಠೊಡ, ಪುಲ್ಲಪ್ಪ ಜಿತಪ್ಪ ರಾಠೊಡ ಎಂಬ ಆರೋಪಿಗಳನ್ನು ಬಂಧಿಸಿ ಮುದಗಲ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುದಗಲ್ಲ ಠಾಣೆ ಪಿಎಐ ಡಾಕೇಶ ಯು., ಮಸ್ಕಿ ಠಾಣೆ ಪಿಎಐ ಸಣ್ಣ ವೀರಣ್ಣ ಹಾಗೂ ಮುದಗಲ ಠಾಣೆ ಸಿಬ್ಬಂದಿ ಅಕ್ಕಮ್ಮ, ಭಾಷಾ ಪೋತ್ನಾಳ, ಹನುಮಂತ ದೇವಭೂಪುರ, ಅಡಿವೆಪ್ಪ, ವೆಂಕಟೇಶ, ಹನುಮಂತ ಭೋವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next