Advertisement

ಮುದ್ದೇಬಿಹಾಳ:ಕೃಷ್ಣಾ ನದಿ ತೀರದಲ್ಲಿ ಮೊಸಳೆಗೆ ವ್ಯಕ್ತಿ ಬಲಿ

06:39 PM Jun 04, 2022 | Team Udayavani |

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ನಾಗರಾಳ ಗ್ರಾಮದಲ್ಲಿ ಮೊಸಳೆಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬಲಿಯಾದವನನ್ನು ಮಲ್ಲನಗೌಡ ಬಿರಾದಾರ (47) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆಯೇ ಮೊಸಳೆ ಈತನನ್ನು ಕೃಷ್ಣಾ ನದಿಯೊಳಕ್ಕೆ ಎಳೆದೊಯ್ದಿತ್ತು. ವಿಷಯ ತಿಳಿದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ, ಸ್ಥಳೀಯ ಈಜುಗಾರರ ನೆರವಿನಿಂದ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಶನಿವಾರ ಸಂಜೆ ಶವ ಪತ್ತೆಯಾಗಿದೆ.

ಸಿಪಿಐ ಆನಂದ ವಾಘ್ಮೋಡೆ ನೇತೃತ್ವದಲ್ಲಿ ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಅರಣ್ಯ ಇಲಾಖೆಯ ಆರ್ ಎಫ್ಓ ರಾಜು ಬಿರಾದಾರ ಅವರ ಮಾರ್ಗದರ್ಶನದಲ್ಲಿ ಕಾನೂನು ಕ್ರಮ ಕೈಕೊಳ್ಳಲಾಗಿದೆ.

ಮಲ್ಲನಗೌಡರ ದೇಹದ ಕೈ, ಕಾಲು ಸಂಪೂರ್ಣವಾಗಿ ಮೊಸಳೆ ತಿಂದು ಹಾಕಿರುವುದು ಶವ ದೊರೆತಾಗ ಕಂಡು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next