Advertisement

ರಸ್ತೆಯಿಲ್ಲದ ಸ್ಥಳದಲ್ಲಿ ಶಾಲೆ ಬೇಕಿತ್ತಾ?: ನಡಹಳ್ಳಿ

01:36 PM Dec 28, 2019 | Naveen |

ಮುದ್ದೇಬಿಹಾಳ: ಪಟ್ಟಣದ ಹೊರ ವಲಯದಲ್ಲಿರುವ ಬಿದರಕುಂದಿ ಗ್ರಾಮದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಆರ್‌
ಎಂಎಸ್‌ಎ ಇಂಗ್ಲಿಷ್‌ ಮೀಡಿಯಂ ಆದರ್ಶ ವಿದ್ಯಾಲಯ ಕಟ್ಟಡ ಕಾಮಗಾರಿ ವಿಳಂಬಕ್ಕೆ ನಾನು ಹೊಣೆಗಾರನಲ್ಲ. ನಾನು ಶಾಸಕನಾಗುವುದಕ್ಕಿಂತ ಮೊದಲೇ ಕಟ್ಟಡದ ಕೆಲಸ ಪ್ರಾರಂಭಿಸಲಾಗಿತ್ತು.

Advertisement

ಸೂಕ್ತ ರಸ್ತೆ ಇಲ್ಲದ ಸ್ಥಳದಲ್ಲಿ ಶಾಲೆ ಕಟ್ಟಡಕ್ಕೆ ಜಾಗೆ ಆಯ್ದುಕೊಂಡಿರುವುದು ತಪ್ಪು. ಆದರೂ ಆದಷ್ಟು ಶೀಘ್ರ ಈ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ, ಶಾಲೆಯ ಮುಖ್ಯಾಧ್ಯಾಪಕಿ ನೀಲಮ್ಮ ತೆಗ್ಗಿನಮಠ, ಎಸ್‌ಡಿಎಂಸಿ ಅಧ್ಯಕ್ಷ ಎಸ್‌. ಎಂ. ಚಿಲ್ಲಾಳಶೆಟ್ಟರ ವಕೀಲರು, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌.ಕರಡ್ಡಿ ಮತ್ತಿತರರೊಂದಿಗೆ ಶಾಲೆಗೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

2009-10ನೇ ಸಾಲಿನಲ್ಲಿ 5 ಕೋಟಿ ರೂ. ಅನುದಾನದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ (ಎನ್‌ಸಿಸಿ) ವಹಿಸಿ ಕೊಡಲಾಗಿದೆ. ಈ ಕಂಪನಿಯವರು ರಾಜ್ಯಾದ್ಯಂತ ಇಂಥ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆ ಹಿಡಿದಿದ್ದಾರೆ. ಶಾಲೆ ಕಟ್ಟಡ ನಿವೇಶನ ಸ್ಥಳಕ್ಕೆ ತೆರಳಲು ರಸ್ತೆಯೇ ಇರಲಿಲ್ಲ. ಆದರೂ ಅಕ್ಕಪಕ್ಕದ ಜಮೀನು ಮಾಲೀಕರ ಮನವೊಲಿಸಿ ಗುತ್ತಿಗೆದಾರರು ಹರಸಾಹಸಪಟ್ಟು ಕಟ್ಟಡ ನಿರ್ಮಿಸಿದ್ದಾರೆ. ಎನ್‌ ಸಿಸಿಯವರು ಕೋರ್ಟ್‌ಗೆ ಹೋಗಿದ್ದರಿಂದ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಅನ್ನೋದನ್ನ ತಿಳಿದುಕೊಂಡೆ.

ಇದೇ ವೇಳೆ ರಸ್ತೆ ಸಮಸ್ಯೆ ಬಗ್ಗೆ ಗೊತ್ತಾಯಿತು ಎಂದರು. ಎನ್‌ಸಿಸಿಯವರ ಮನವೊಲಿಸಿ ಕಟ್ಟಡ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಂಡಿದ್ದೇನೆ. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ರಸ್ತೆ ಒದಗಿಸಲು ಪ್ರಯತ್ನಿಸಿದ್ದೇನೆ. ಶಾಲೆ ಪಕ್ಕದ ಜಮೀನು ಮಾಲೀಕ ತಡಸದ ಎನ್ನುವವರು ತಮ್ಮ ಜಮೀನಿನಲ್ಲಿ ಶಾಲೆಗೆ ಹೋಗಲು ರಸ್ತೆ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ.

Advertisement

ಮಾರುತಿನಗರ ಮೂಲಕ ತಾರನಾಳಗೆ ಹೋಗುವ ಮುಖ್ಯರಸ್ತೆಯಿಂದ ಶಾಲೆವರೆಗೆ ಅಂದಾಜು ಒಂದೂವರೆ ಕಿ.ಮೀ. ಸಂಪರ್ಕ ರಸ್ತೆಗೆ ಶೀಘ್ರ ಟೆಂಡರ್‌ ಕರೆದು ಡಾಂಬರ್‌ ರಸ್ತೆ ನಿರ್ಮಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಶಾಲಾ ಕಟ್ಟಡ ಪರಿಶೀಲಿಸುವ ವೇಳೆ ಹಲವೆಡೆ ಕಳಪೆ ಕಾಮಗಾರಿ ಮಾಡಿದ್ದು ಕಣ್ಣಿಗೆ ರಾಚುವಂತಿತ್ತು. ನೆಲಮಹಡಿ, ಮೊದಲ ಮಹಡಿಯಲ್ಲಿನ ಕೊಠಡಿಗಳು, ವಿವಿಧ ಮೂಲಸೌಕರ್ಯ ಮುಂತಾದವುಗಳನ್ನು ಪರಿಶೀಲಿಸಿದ ಶಾಸಕರು ಸ್ಥಳದಲ್ಲಿದ್ದ ಎನ್‌
ಸಿಸಿ ಸುಪರ್‌ವೈಜರ್‌ ಸುನೀಲ ಅವರನ್ನು ಕರೆದು ಎಲ್ಲೆಲ್ಲಿ ಕಳಪೆ ಕೆಲಸ ನಡೆದಿದೆಯೋ ಅದೆಲ್ಲವನ್ನು ಗುಣಮಟ್ಟದಲ್ಲಿ ನಿರ್ಮಿಸಲು ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸುವಂತೆ ಸಲಹೆ ನೀಡಿದರು. ಈ ಕಟ್ಟಡಕ್ಕೆ ಸ್ವಂತ ನೀರಿನ ಮೂಲ ದೊರಕಿಸಿಕೊಡುವಂತೆ ಜೊತೆಗಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಮಾಜಿ ಸದಸ್ಯರಾದ ಮನೋಹರ ತುಪ್ಪದ, ರಾಜು ಹೊನ್ನುಟಗಿ, ಬಿಜೆಪಿ ಧುರೀಣ ಬಸವರಾಜ ಗುಳಬಾಳ, ಶಿಕ್ಷಕ ಸಂಗಮೇಶ ಸಜ್ಜನ, ನಾಗರಾಜ ಕನ್ನೊಳ್ಳಿ, ಬಸನಗೌಡ ಪಾಟೀಲ ನಡಹಳ್ಳಿ, ಪಿಎಸೈ ಮಲ್ಲಪ್ಪ ಮಡ್ಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next