Advertisement

Muddebihal; ಕಾರ್ಮಿಕ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ

06:26 PM Aug 17, 2023 | Vishnudas Patil |

ಮುದ್ದೇಬಿಹಾಳ: ಇಲ್ಲಿನ ಹಡಲಗೇರಿ ರಸ್ತೆ ಪಕ್ಕದ ಪದ್ಮಾವತಿ ಗುಡ್ಡದ ಬಳಿ ನಿರ್ಮಾಣ ಹಂತದಲ್ಲಿರುವ ಕೊಳಚೆ ಅಭಿವೃದ್ದಿ ಮಂಡಳಿಯ ಮನೆಯೊಂದರಲ್ಲಿ ಅನುಮಾನಾಸ್ಪ ರೀತಿಯಲ್ಲಿ ಕಾರ್ಮಿಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಮನೆಗಳ ನಿರ್ಮಾಣ ಕಾಮಗಾರಿಯ ಸೆಂಟ್ರಿಂಗ್ ಮೇಸ್ತ್ರಿ ವಿಜಯಪುರದ ಅಮ್ಜದ್ ಹಾಜಿಸಾಬ ವಾಲಿಕಾರ (52) ಎಂದು ಗುರುತಿಸಲಾಗಿದೆ‌.

Advertisement

ಮೃತನ ಬೆನ್ನು ಸೇರಿ ದೇಹದ ರಕ್ತದ ಮಡುವಿನಲ್ಲಿರುವುದು ಅನುಮಾನಕ್ಕೆ ಕಾರಣವಾಗಿದೆ. ದೇಹ ಮಲಗಿದ ಮಾದರಿಯಲ್ಲಿದೆ. ಆತನ ಜತೆಗೆ ಅದೇ ಕೋಣೆಯಲ್ಲಿ ಮಲಗಿದ್ದ ಮೂವರು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಕೇಂದ್ರದಿಂದ ವಿಶೇಷ ಅಪರಾಧ ತನಿಖಾ ತಂಡ ಆಗಮಿಸಿದ್ದು ಪರಿಶೀಲನೆ ನಡೆಸಿದೆ.

ಡಿವೈಎಸ್ಪಿ ಕರುಣಾಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲು ಸಿದ್ದತೆ ನಡೆದಿವೆ. ಘಟನಾ ಸ್ಥಳದಲ್ಲಿ ಮೃತನ ಕುಟುಂಬದ ಸದಸ್ಯರು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next