Advertisement

ಮಳೆ-ಗಾಳಿಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಬೈಕ್ ಗಳ ನಡುವೆ ಢಿಕ್ಕಿ: ಓರ್ವನ ಸ್ಥಿತಿ ಗಂಭೀರ

08:56 PM Jun 05, 2022 | Team Udayavani |

ಮುದ್ದೇಬಿಹಾಳ:  ಸಂಭವನೀಯ ಭಾರೀ ಗಾಳಿ ಮಳೆಯಿಂದ ತಪ್ಪಿಸಿಕೊಂಡು ಊರು ಸೇರಲು ವೇಗವಾಗಿ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಮುದ್ದೇಬಿಹಾಳ ತಾಳಿಕೋಟೆ ರಾಜ್ಯ ಹೆದ್ದಾರಿಯ ಹೊಕ್ರಾಣಿ ಕ್ರಾಸ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.

Advertisement

ಘಟನೆಯಲ್ಲಿ ಒಂದು ಬೈಕ್ ನಲ್ಲಿದ್ದ ಹೊಕ್ರಾಣಿ ಗ್ರಾಮದ ವ್ಯಕ್ತಿಯೊಬ್ಬನ ತಲೆಗೆ ಪೆಟ್ಟಾಗಿದ್ದು ಆತನನ್ನು ಅಂಬ್ಯೂಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದು ಬೈಕ್ ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಇದ್ದು ಅಂಬ್ಯುಲೆನ್ಸ್ ಏರಿ ಚಿಕಿತ್ಸೆಗೆ ಬರಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದು ಸಿಪಿಐ ಆನಂದ ವಾಘ್ಮೋಡೆ ಸೂಚನೆ ಮೇರೆಗೆ ಘಟನೆ ನಡೆದ ಸ್ಥಳದ ವ್ಯಾಪ್ತಿ ಹೊಂದಿರುವ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸೈ ವಿನೋದ ದೊಡಮನಿ ಸ್ಥಳಕ್ಕೆ ತೆರಳಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಇದನ್ನೂ ಓದಿ : ಕೆರೆಗೆ ಈಜಲು ಹೋಗಿದ್ದ ಯುವಕರು ನೀರುಪಾಲು : ಸಂಡೂರಿನ ಶಿವಪುರ ಕೆರೆಯಲ್ಲಿ ದುರ್ಘಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next