Advertisement

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

03:11 PM Oct 24, 2024 | Poornashri K |

ಮುದ್ದೇಬಿಹಾಳ: ಭಾರೀ ಕ್ರೇನ್ ನ ಚಕ್ರ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ತಾಲೂಕಿನ ನಾಲತವಾಡ ಹತ್ತಿರ ಹೊಂಡಾ ಶೋರೂಮ್ ಬಳಿ ಮುದ್ದೇಬಿಹಾಳ ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ (ಅ.24) ನಡೆದಿದೆ.

Advertisement

ಮೃತನನ್ನು ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ನಾಗರಹಾಳ ಗ್ರಾಮದ ಶಿವಪುತ್ರಪ್ಪ ಭಜಂತ್ರಿ (48) ಎಂದು ಗುರುತಿಸಲಾಗಿದೆ.

ಭಜಂತ್ರಿ ಬೈಕ್ ಮೇಲೆ ಹೊರಟಿದ್ದಾಗ ಎದುರಿನಿಂದ ಬಂದ ಕ್ರೇನ್ ನ ಮುಂದಿನ ಚಕ್ರ ಬಡಿದಿದೆ. ಆಯತಪ್ಪಿ ನೆಲಕ್ಕೆ ಬಿದ್ದ ಆತನ ದೇಹದ ಮೇಲೆ ಕ್ರೇನ್ ನ ಮಧ್ಯದ ಚಕ್ರಗಳು ಹರಿದು ಈ ದುರಂತ ಸಂಭವಿಸಿದೆ.

ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next