Advertisement

ಮುದ್ದೇಬಿಹಾಳ: ಟ್ರ್ಯಾಕ್ಟರ್ ಟ್ರ್ಯಾಲಿಗೆ ಗುದ್ದಿ ಬೈಕ್ ಸವಾರ ಸಾವು

10:16 PM Dec 19, 2022 | Vishnudas Patil |

ಮುದ್ದೇಬಿಹಾಳ: ಕಬ್ಬು ತುಂಬಿಕೊಂಡು ರಸ್ತೆ ಪಕ್ಕ ನಿಂತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಗೆ ಬೈಕ್ ಗುದ್ದಿ ತಲೆಗೆ ಗಂಭೀರ ಪೆಟ್ಟಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ವಿಜಯಪುರ ಮುಖ್ಯ ರಸ್ತೆಯ ಅಗಸಬಾಳ ಕ್ರಾಸ್ ಬಳಿ ನಡೆದಿದೆ.

Advertisement

ಮೃತನನ್ನು ಢವಳಗಿ ಗ್ರಾಮದ ಮಹೇಶ ಕನ್ನಯ್ಯ ದಡ್ಡೇನವರ್ (40) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಪಿಎಸೈ ಆರೀಫ ಮುಷಾಪುರಿ ಸಿಬಂದಿಗಳೊಂದಿಗೆ ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next