Advertisement

MUDA Scam: ತನಿಖೆ ಬಳಿಕ ಸಿದ್ದು ರಾಜಕೀಯ ಜೀವನ ಕಪ್ಪೋ-ಬಿಳುಪೋ ಗೊತ್ತಾಗಲಿದೆ: ಸಿ.ಟಿ. ರವಿ

01:00 AM Aug 23, 2024 | Team Udayavani |

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಹೊಂದಿಲ್ಲವೆಂದು ಹೇಳಿಕೊಳ್ಳುತ್ತಿದ್ದು ಮುಡಾ ಹಗರಣ ತನಿಖೆಯಿಂದ ಬಿಳುಪೋ, ಕಪ್ಪೋ ಎನ್ನುವುದು ಗೊತ್ತಾಗಲಿದೆ. ಯಾವುದೇ ವಾಷಿಂಗ್‌ ಪೌಡರ್‌ನಿಂದ ತೊಳೆಯಲಾಗದಷ್ಟು ಕಪ್ಪು ಇದ್ದರೂ ಇರಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಕುಮಾರಸ್ವಾಮಿ ಅವರನ್ನು ಏಕಾಏಕಿ ಬಂಧಿ ಸಲು ಸಾಧ್ಯವಿಲ್ಲ, ಕಾನೂನು ಇದೆ. ನ್ಯಾಯಾಲಯವಿದೆ. ಕುಮಾರಸ್ವಾಮಿ ಅವರು ನಾನು ಸಂವಿಧಾನಕ್ಕಿಂತ ಮಿಗಿಲು ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವರದ್ದು 2007ರ ಪ್ರಕರಣವೆಂದು ಹೇಳಲಾಗುತ್ತಿದ್ದು 2013ರಿಂದ 18ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವೇ ಅಧಿ ಕಾರದಲ್ಲಿತ್ತು.

2019ರಲ್ಲಿ ಕಾಂಗ್ರೆಸ್‌ ಬೆಂಬಲದಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಆಗಲೂ ಸುಮ್ಮನೆ ಇದ್ದರು. ಆಗ ಕುಮಾರಸ್ವಾಮಿ ಕಾಂಗ್ರೆಸ್‌ನವರಿಗೆ ಬಹಳ ಒಳ್ಳೆಯವರಾಗಿದ್ದರು. ಡಿ.ಕೆ. ಶಿವಕುಮಾರ್‌ ಜೋಡೆತ್ತು, ಅಣ್ತಮ್ಮ ಎನ್ನುತ್ತಿದ್ದರು. ಕುಮಾರಸ್ವಾಮಿ ಬಿಜೆಪಿ ಮೈತ್ರಿಕೂಟಕ್ಕೆ ಬಂದ ಮೇಲೆ ವಿಲನ್‌ ಆಗಿದ್ದಾರೆ. ಈಗ ಕಾಂಗ್ರೆಸ್‌ನವರು ನಡೆದುಕೊಳ್ಳುವುದನ್ನು ನೋಡಿದಾಗ ರಾಜಕೀಯ ದುರುದ್ದೇಶ ಎನ್ನುವುದು ಎಂತವರಿಗೂ ಅರ್ಥವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next