Advertisement

MUDA Case: ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್

12:26 PM Oct 19, 2024 | Team Udayavani |

ಹುಬ್ಬಳ್ಳಿ: ಮುಡಾ ಹಗರಣದ ಪಾರದರ್ಶಕ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಶನಿವಾರ (ಅ.19) ಮಾತನಾಡಿದ ಅವರು, ಮುಡಾ ಹಗರಣ ಬಗ್ಗೆ ಈಗಾಗಲೇ ಜನತೆಗೆ ಗೊತ್ತಿದೆ. ಮುಡಾದಲ್ಲಿ ಐದು ಸಾವಿರ ಕೋಟಿ ಅಕ್ರಮ ಎಂಬ ಮಾತು ಕೇಳಿ ಬಂದಿತ್ತು. ಮುಡಾ ಅಕ್ರಮದಲ್ಲಿ ಸಿಎಂ ಕುಟುಂಬ ನೇರವಾಗಿ ಭಾಗಿಯಾಗಿರೋದ್ರಿಂದ ರಾಜೀನಾಮೆಗೆ ಒತ್ತಾಯ ಮಾಡಿದ್ವಿ. ಸಿಎಂ ರಾಜೀನಾಮೆಗೆ ಮೊದಲಿನಿಂದಲೂ ಒತ್ತಾಯ ಮಾಡಿದ್ವಿ. ಈ ಬಗ್ಗೆ ರಾಜ್ಯಪಾಲರಿಗೂ ದೂರು ಕೊಟ್ಟಿದ್ದೆವು. ರಾಜ್ಯಪಾಲರು ಕೂಡ ತನಿಖೆಗೆ ಅನುಮತಿ ನೀಡಿದರು. ಸಿಎಂ ಹೈಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಿ ರಿಟ್ ಅರ್ಜಿ ಹಾಕಿದರು. ರಿಟ್ ಅರ್ಜಿ ಕೂಡ ವಜಾವಾಗಿ ಸಿಎಂ ವಿರುದ್ದ ತನಿಖೆಗೆ ಆದೇಶ ನೀಡಿತ್ತು. ಈಗ ಮುಡಾಗೆ ಇಡಿ ಕೂಡ ಎಂಟ್ರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next