Advertisement

MUDA Case: ಹೈಕೋರ್ಟ್‌ ತೀರ್ಪು ಪೊಲಿಟಿಕಲ್‌ ಜಡ್ಜ್ಮೆಂಟ್‌: ಸಚಿವ ಜಮೀರ್‌ ಅಹ್ಮದ್‌

01:04 AM Sep 26, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್‌ ತೀರ್ಪು ಪೊಲಿಟಿಕಲ್‌ ಜಡ್ಜ್ಮೆಂಟ್‌ ಎಂಬುದು ನನ್ನ ಅಭಿಪ್ರಾಯ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಸುದ್ದಿಗಾರರಿಗೆ ತಿಳಿಸಿದರು.

Advertisement

ಸಿದ್ದರಾಮಯ್ಯ ಜನಪ್ರಿಯತೆಯನ್ನು ಸಹಿಸಲಾಗದೆ ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಅವರ ರಾಜೀನಾಮೆ ಪ್ರಶ್ನೆಯೇ ಬರುವುದಿಲ್ಲ. ತನಿಖೆಯಲ್ಲಿ ಸಾಬೀತಾದ ಮೇಲೆ ಆ ಚರ್ಚೆ ಹೊರತು, ಈಗ ಅದರ ಆವಶ್ಯಕತೆಯೇ ಇಲ್ಲ. ಸಿದ್ದರಾಮಯ್ಯ ಅವರನ್ನು 5 ವರ್ಷ ಅಲ್ಲಾಡಿಸಲಿಕ್ಕೂ ಆಗುವುದಿಲ್ಲ ಎಂದರು.

ಎಷ್ಟು ಜನ ಜಾಮೀನಿನ ಮೇಲೆ ಹೊರಗಿದ್ದಾರೆ?: ಹೆಬ್ಬಾಳ್ಕರ್‌
ಸಿದ್ದರಾಮಯ್ಯ ವಿಚಾರದಲ್ಲಿ ನೈತಿಕತೆ ಬಗ್ಗೆ ಮಾತನಾಡುವವರು ಮೊದಲು ತಮಗೆ ನೈತಿಕತೆ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ರಾಜಕೀಯ ಸಂಚು. ರಾಜಕೀಯವಾಗಿಯೇ ಎದುರಿಸುತ್ತೇವೆ. ಮುಖ್ಯಮಂತ್ರಿ ರಾಜೀನಾಮೆ ಕೇಳುವ ಮೊದಲು ಎಷ್ಟು ಜನರ ಮೇಲೆ ಎಫ್ಐಆರ್‌ ಇದೆ. ಎಷ್ಟು ಜನ ಜಾಮೀನಿನ ಮೇಲಿದ್ದಾರೆ ಲೆಕ್ಕ ಹಾಕಲಿ. ಅವರ ರಾಜೀನಾಮೆ ಪಡೆಯಲಿ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next