Advertisement

Moodabidri : ಮುಂದುವರಿದ ಬಿರುಗಾಳಿ ಅಬ್ಬರ

12:49 AM Jul 23, 2024 | Team Udayavani |

ಮೂಡುಬಿದಿರೆ: ಸೋಮವಾರವೂ ಮೂಡುಬಿದಿರೆ ಪರಿಸರದಲ್ಲಿ ಬಿರುಗಾಳಿ ಸಹಿತ ಆಗಾಗ ಜೋರಾಗಿ ಮಳೆ ಸುರಿದು ವ್ಯಾಪಕ ಹಾನಿಯುಂಟಾಗಿದೆ. ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲನಿ ಪರಿಸರದಲ್ಲಿ ಸೋಮವಾರ ಸಂಜೆ ಗಾಳಿಮಳೆಗೆ 6 ಮನೆಗಳು ಹಾನಿಗೀಡಾಗಿವೆ. 15ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಿದ್ದು, ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ.

Advertisement

ಅಲಂಗಾರ್‌ ಚರ್ಚ್‌ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಕಾರಿಗೆ ಹಾನಿಯಾಗಿದ್ದು, ಚಾಲಕ ವಿಶುಕುಮಾರ್‌ ಶೆಟ್ಟಿ ಪಾರಾಗಿದ್ದಾರೆ.

ಚಂದ್ರಾಪುರದಲ್ಲಿ ನಾರಾಯಣ, ಶಾಂತಿ ರಾಡ್ರಿಗಸ್‌, ಸರಸ್ವತಿ ಶೆಟ್ಟಿಗಾರ್‌, ಜುಲಿಯಾನ ಡಿ’ ಸೋಜಾ, ಆಶ್ರಯ ಕಾಲನಿಯಲ್ಲಿ ಸತೀಶ್‌ ಸಾಲ್ಯಾನ್‌ ಹಾಗೂ ಮತ್ತೋರ್ವರ ಮನೆಗೆ ಹಾನಿಯಾಗಿವೆ.

ಅಲಂಗಾರ್‌ ರಿಕ್ಷಾ ಜಂಕ್ಷನ್‌ನಲ್ಲಿ ಬೃಹತ್‌ ಗಾತ್ರದ ಮರ ಬಿದ್ದಿದ್ದು, ಆ ವೇಳೆಗೆ ಯಾವುದೇ ವಾಹನ ಇಲ್ಲದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.

ಪಡುಕೊಣಾಜೆ ವ್ಯಾಪ್ತಿಯಲ್ಲಿ ರಬ್ಬರ್‌ ಪ್ಲಾಂಟೇಶನ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ. ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆ ರಸ್ತೆಗೆ ಮರವೊಂದು ಉರುಳಿ ಬಿದ್ದಿದೆ.

Advertisement

ಕಂದಾಯ, ಮೆಸ್ಕಾಂ ಅಧಿಕಾರಿಗಳು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು. ಮೆಸ್ಕಾಂ ಸಿಬಂದಿ, ಗುತ್ತಿಗೆದಾರರು ವಿದ್ಯುತ್‌ ಕಂಬ ಪುನರ್‌ಸ್ಥಾಪನೆ, ವಿದ್ಯುತ್‌ ಸಂಪರ್ಕ ಕಲ್ಪಿಸಲು ಶ್ರಮಿಸಿದರು. ತಹಶೀಲ್ದಾರ್‌ ಪ್ರದೀಪ್‌ ವಿ. ಕುರ್ಡೇಕರ್‌, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಮಾಜಿ ಸಚಿವ ಅಭಯಚಂದ್ರ ಜೈನ್‌ ಸಹಿತ ಪ್ರಮುಖ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next