Advertisement

40 ರೂಗೆ ಕೂಲಿ ಮಾಡಿದ ಎಂಟಿಬಿ ಸಾವಿರಾರು ಕೋಟಿ ಒಡೆಯ ಆಗಿದ್ದು ಹೇಗೆ?

09:34 AM Nov 22, 2019 | Team Udayavani |

ಚಿಕ್ಕಬಳ್ಳಾಪುರ:  ಒಂದರೆಡು ಬಾರಿ ಮಂತ್ರಿ ಆಗಿದ್ದರೆ ಅವರಿಗೆ ಪ್ರಜ್ಞೆ ಬರುತ್ತಿತ್ತು. ಮೊದಲ ಬಾರಿಗೆ ಮಂತ್ರಿ ಆಗಿದ್ದಕ್ಕೆ ಸಚಿವ ಮಾಧುಸ್ವಾಮಿ ಧಿಮಾಕು ತೋರಿಸುತ್ತಿದ್ದಾರೆ ಎಂದು ಕಾನೂನು ಸಚಿವರು ಕನಕ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಟೀಕಿಸಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಧುಸ್ಚಾಮಿ ಸಂವಿಧಾನದ ಅರಿವು ಇಲ್ಲ. ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸುವ ಸಂದರ್ಭದಲ್ಲಿ ರಾಗ, ದ್ವೇಷ ಮಾಡುವುದಿಲ್ಲ ಎಂದು ಪ್ರಮಾಣ ಸ್ಪೀಕರಿಸಿರುವುದನ್ನು ಮರೆತಿದ್ದಾರೆಂದರು. ಯಡಿಯೂರಪ್ಪ ಕ್ಷಮೆ ಕೇಳಿದರೂ ಮಾಧುಸ್ವಾಮಿ ಬದಲಾಗಿಲ್ಲ ಎಂದರು. ಪಕ್ಷಾಂತರಿಗೆ ಪಾಠ ಆಗಬೇಕು. ಸಿದ್ದರಾಮಯ್ಯರನ್ನು ಹೊಗಳುತ್ತಿದ್ದ ಸುಧಾಕರ್ ಈಗ ಸಿದ್ದರಾಮಯ್ಯರನ್ನು ಕೆಟ್ಟದಾಗಿ ಮಾತನಾಡಲು ಹೊರಟಿದ್ದಾರೆ. ನಾಲಿಗೆಗೆ ಮೂಳೆ ಇಲ್ಲ ಎಂದು ಏನು ಬೇಕಾದರೂ ಮಾತನಾಡಬಹುದೇ ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಕಾಂಗ್ರೆಸ್ ನಾಯಕರಿಗೆ ಸಾಲ ನೀಡಿರುವ ಕುರಿತು ಹೇಳಿಕೆ ನೀಡಿರುವ ಪ್ರತಿಕ್ರಿಯೆ ನೀಡಿದ ಅವರು, 40 ರೂಪಾಯಿಗೆ ಕೂಲಿ ಮಾಡಿದವ ಎಂಟಿಬಿ ನಾಗರಾಜ್,  ಸಾವಿರಾರು ಕೋಟಿ ಒಡೆಯ ಹೇಗೆ ಆದ. ಸಾಲ ಕೊಟ್ಟಿದ್ದರೆ ವಾಪಸ್ಸು ಕೊಡತಾರೆ. ಅದನ್ನು ಹೇಳ ಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next